ದ. ಕ ಜಿಲ್ಲಾಡಳಿತ ವತಿಯಿಂದ ನೆರೆ ಹಾಗೂ ಪ್ರಾಕೃತಿಕ ವಿಕೋಪ ಸಂತ್ರಸ್ಥರಿಗೆ ➤ ಪರಿಹಾರ ಸಾಮಾಗ್ರಿ ಸ್ವೀಕರಿಸಲು ಇಂದು ಕಡೆಯ ದಿನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ರಾಜ್ಯದ ಹಾಗೂ ಜಿಲ್ಲೆಯ ವಿವಿಧೆಡೆ ಉಂಟಾಗಿರುವ ನೆರೆ ಹಾಗೂ ಪ್ರಾಕೃತಿಕ ವಿಕೋಪ ಸಂತ್ರಸ್ಥರಿಗೆ ವಿತರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಮಂಗಳೂರು ಕೆ.ಪಿ.ಟಿ ಯಲ್ಲಿ ಸಾರ್ವಜನಿಕರಿಂದ ಆಹಾರ, ಬಟ್ಟೆ ಬರೆ ಮತ್ತಿತರ ಸಾಮಾಗ್ರಿಗಳನ್ನು ವಿತರಿಸಲು ಕೇಂದ್ರವನ್ನು ತೆರೆಯಲಾಗಿದೆ.

ಸಾರ್ವಜನಿಕರು ಈ ಕೇಂದ್ರಕ್ಕೆ ಸಾಕಷ್ಟು ಸಾಮಾಗ್ರಿಗಳನ್ನು ನೀಡಿರುತ್ತಾರೆ. ನೆರೆ ಸಂತ್ರಸ್ತರಿಗೆ ಇವುಗಳನ್ನು ಕಳುಹಿಸಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿರುತ್ತದೆ. ಈ ಕೇಂದ್ರವು ಆಗಸ್ಟ್ 19 ಸೋಮವಾರದ ವರೆಗೆ ಅಂದರೆ ಇಂದು ಸಂಜೆ 6ಗಂಟೆ ತನಕ ತೆರೆದಿರುತ್ತದೆ.  ಸಾರ್ವಜನಿಕರು ನೆರೆ ಸಂತ್ರಸ್ತರಿಗೆ ಯಾವುದೇ ವಸ್ತುಗಳನ್ನು ಕೊಡಲು ಇಚ್ಛಿಸಿದ್ದಲ್ಲಿ ಇಂದು ಸಂಜೆ 6 ಗಂಟೆಯೊಳಗೆ ಈ ಕೇಂದ್ರಕ್ಕೆ ತಲುಪಿಸಬೇಕು. ನಂತರ ಬಂದ ಸಾಮಾಗ್ರಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Also Read  ಮಣಿಪಾಲ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

error: Content is protected !!
Scroll to Top