ಬಿಜೆಪಿಗೆ ಮತದಾರನ ಆಶೀರ್ವಾದ :ಎಸ್.ಅಂಗಾರ

(ನ್ಯೂಸ್ ಕಡಬ) newskadaba.com ಸವಣೂರು, ಮೇ.4. ಬಿಜೆಪಿಗೆ ಮತದಾರ ಆಶೀರ್ವದಿಸುತ್ತಾನೆ.ಯಾರು ಏನು ಹೇಳಿದರೂ ಬಿಜೆಪಿಯ ಗೆಲುವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.ಸುಳ್ಳು ಆಪಾದನೆಗಳಿಗೆ ಮತದಾರನೇ ಉತ್ತರಿಸುತ್ತಾನೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ಪಾಲ್ತಾಡಿ ಬೂತ್  71ರಲ್ಲಿ ಕಾರ್ಯಕರ್ತರನ್ನು ಹಾಗೂ ಪಕ್ಷದ ಪ್ರಮುಖರ ಬೇಟಿ ನೀಡಿ ಮಾತನಾಡಿದರು.

ಈಗಾಗಲೇ ಬಿಜೆಪಿಗೆ ಬಹುಮತ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿರುವುದರಿಂದ ಕಾಂಗ್ರೆಸ್‍ನವರು ಹತಾಶರಾಗಿ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ.ಕೇಂದ್ರ ಸರಕಾರದ ಯೋಜನೆಗಳನ್ನು ತನ್ನದೆಂದು ಪ್ರಚಾರ ಮಾಡುವುದು, ಕೇಂದ್ರ ಸರಕಾರದ ಅನುದಾನದ ಸಿಆರ್‍ಎಫ್ ಅನುದಾನದ ಕಾಮಗಾರಿಗಳಿಗೆ ತಡೆಯೊಡ್ಡುವ ಮೂಲಕ ಅಭಿವೃದ್ದಿಗೂ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಎಸ್.ಅಂಗಾರ ಹೇಳಿದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ಧನ್, ಪಾಲ್ತಾಡಿ ಶಕ್ತಿ ಕೇಂದ್ರದ ಪ್ರಭಾರಿ ಗಣೇಶ ಉದನಡ್ಕ ,ಬಿಜೆಪಿ ಸವಣೂರು ಗ್ರಾ.ಪಂ.ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಬೆಳಂದೂರು ಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರಾದ ದಿವಾಕರ ಬಂಗೇರ ಬೊಳಿಯಾಲ, ಮಾಜಿ ಸದಸ್ಯ ಯತೀಶ್ ಕುಮಾರ್, ಪ್ರಮುಖರಾದ ಸಂಜೀವ ಗೌಡ ಸೈನಿಕ್, ಜನಾರ್ಧನ್ ಗೌಡ, ಬೂತ್ ಸಮಿತಿ ಅಧ್ಯಕ್ಷ ಜಯಪ್ರಶಾಂತ್,ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ಮೊದಲಾದವರಿದ್ದರು.

error: Content is protected !!

Join the Group

Join WhatsApp Group