ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಮೇ.2. ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ ಅಪರಾಹ್ನ 2.30ಕ್ಕೆ ಕಡಬ ಒಕ್ಕಲಿಗ ಗೌಡ ಸಮಾಜ ಭವನದಲ್ಲಿ ನಡೆಯಲಿದೆ.

ರಾಷ್ಟ್ರಮಟ್ಟದ ಒಪ್ಪಂದದ ಪ್ರಕಾರ ಜೆಡಿಎಸ್ -ಬಿಎಸ್ಪಿ ಮಧ್ಯೆ ಮೈತ್ರಿ ಏರ್ಪಟ್ಟಿದ್ದು ಸುಳ್ಯ ಕ್ಷೇತ್ರದ ಅಭ್ಯರ್ಥಿ ರಘುಧರ್ಮ ಸೇನಾ ಅವರ ಪರವಾಗಿ ಉಭಯ ಪಕ್ಷಗಳು ಮೇ.4ರಂದು ಅಪರಾಹ್ನ 2.30 ಕ್ಕೆ ಸರಿಯಾಗಿ ಕಡಬ ಒಕ್ಕಲಿಗ ಗೌಡ ಸಮಾಜ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಜರಗಲಿದೆ ಎಂದು ಕಡಬ ತಾಲೂಕು ಅಧ್ಯಕ್ಷರೂ, ರಾಜ್ಯ ಕಾರ್ಯದರ್ಶಿಯಾದ ಸೈಯದ್ ಮೀರಾ ಸಾಹೇಬ್ ತಿಳಿಸಿದ್ದಾರೆ.

ರೈತರ ಶೋಷಿತ ವರ್ಗದ ಕ್ಷೇಮಾಭಿವೃದ್ದಿಯ ಕನಸು ಹೊತ್ತಿರುವ ಜೆಡಿಎಸ್ ಹಾಗೂ ಬಿಎಸ್ಪಿ ಪರ ಜನರು ನಿರೀಕ್ಷೆ ಇಟ್ಟಿದ್ದು ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಮಟ್ಟದ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಕ್ಷೇತ್ರದ ಅಭ್ಯರ್ಥಿ ರಘುಧರ್ಮ ಸೇನಾ ಕೂಡ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ಜೆಡಿಎಸ್ ಪದಾಧಿಕಾರಿಗಳು ಹಾಗೂ ಬಿಎಸ್ಪಿಯ ಪದಾಧಿಕಾರಿಗಳು, ಹೆಚ್ಚಿನ ಕಾರ್ಯಕರ್ತರು ಭಾಗವಹಿಸಿ ಸಲಹೆ ಸೂಚನೆ ನೀಡಬೇಕಾಗಿ ಜಾತ್ಯಾತೀತ ಜನತಾದಳ ಕಡಬ ತಾಲೂಕಿನ ಅಧ್ಯಕ್ಷರಾದ ಸೈಯದ್ ಮೀರಾ ಸಾಹೇಬ್ ಕೋರಿದ್ದಾರೆ.

error: Content is protected !!

Join the Group

Join WhatsApp Group