ಬೆಂಗಳೂರು: ವಿಮಾನ ನಿಲ್ದಾಣದಲ್ಲಿ 2.5 ಕೆಜಿ ಚಿನ್ನ ಕಳ್ಳ ಸಾಗಣೆ        ಆರೋಪಿಗಳಿಬ್ಬರು ಅರೆಸ್ಟ್     

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.27. ದುಬೈಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದ ವಿಮಾನದ ಇಬ್ಬರು ಪ್ರಯಾಣಿಕರ ಬಳಿ 1,68,95,725 ರೂ. ಮೌಲ್ಯದ 2.5 ಕೆಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ದುಬೈಯಿಂದ ಕೆಐಎಗೆ ಬಂದ ಪ್ರಯಾಣಿಕರನ್ನು ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ಸ್ಕಾನಿಂಗ್ ಮಾಡಿ ತಪಾಸಣೆ ನಡೆಸುತ್ತಿದ್ದರು. ಈ ಇಬ್ಬರ ಬಟ್ಟೆಯಲ್ಲಿ ಲೋಹ ಬಚ್ಚಿಟ್ಟಿರುವುದು ಗೊತ್ತಾಗಿದೆ ಎನ್ನಲಾಗಿದೆ.

Also Read  ಮಲಯಾಳಂನ ಖ್ಯಾತ ನಿರ್ದೇಶಕ ನರನಿಪುಳ ಶಾನವಾಸ್‌ ಹೃದಯಾಘಾತದಿಂದ ನಿಧನ

                                                          

 

error: Content is protected !!
Scroll to Top