ಇನ್ಮುಂದೆ ಪೊಲೀಸರಿಗೆ ಹೇಳದೆ ದಾಳಿ ನಡೆಸುತ್ತೇವೆ ➤ಭಜರಂಗದಳ ಮುಖಂಡ ಪುನೀತ್ ಅತ್ತಾವರ..!

(ನ್ಯೂಸ್ ಕಡಬ)newskadaba.com ಮಂಗಳೂರು, ಜು.21. ಭಜರಂಗದಳದ ಕಾರ್ಯಕರ್ತರ ಮೃಲೆ ಗಡಿಪಾರು ಆದೇಶ ಹಿನ್ನೆಲೆ, ಮಂಗಳೂರು ಪೊಲೀಸರ ಕ್ರಮದ ಬಗ್ಗೆ ಭಜರಂಗದಳ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಭಜರಂಗ ದಳ ಮುಖಂಡ ಪುನೀತ್ ಅತ್ತಾವರ, ನಾವು ಇಲ್ಲಿ ತನಕ ಪೊಲೀಸರಿಗೆ ಸೂಚನೆ ನೀಡಿ ನಡೆಯುತ್ತಿದ್ದು, ಇನ್ನು ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡೋದಿಲ್ಲ.

ಮಾಹಿತಿ ನೀಡಿರೋದಕ್ಕೆ ಗಡಿಪಾರಿನ ನೋಟಿಸ್ ನೀಡಿದ್ದಾರೆ. ಕಣ್ಣೆದುರೇ ಅಕ್ರಮಗಳು ನಡೆದಾಗ ಸುಮ್ಮನೆ ಇರಬೇಕಾ ? ಗೋ ಹತ್ಯೆ ನಿಷೇಧದ ಬಗ್ಗೆ ಸರ್ಕಾರದ ಆದೇಶವೇ ಇದೆ. ಈಗ ನಮ್ಮ ಮೇಲೆಯೇ ಕೇಸ್ ಹಾಕಿದ್ದಾರೆ ಎಂದು ಹೇಳಿದ್ದಾರೆ.

 

error: Content is protected !!
Scroll to Top