ನಾಲ್ಕು ಗಂಟೆಗಳ ಅಂತರದಲ್ಲಿ ನಾಲ್ಕು ಮಂದಿ ಮಹಿಳೆಯರ ಸರಗಳ್ಳತನ

ನ್ಯೂಸ್ ಕಡಬ) newskadaba.com ಬೆಂಗಳೂರು, ಜ.07.   ಎರಡು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ನಾಲ್ಕು ಗಂಟೆಗಳ ಅಂತರದಲ್ಲಿ ನಾಲ್ವರು ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರು ನಗರದ ಉತ್ತರ ವಿಭಾಗದಲ್ಲಿ ವರದಿಯಾಗಿದೆ .

ಸಂತ್ರಸ್ತೆಯರನ್ನು ಪ್ರಿಯಾಲಕ್ಷ್ಮಿ, ಲಲಿತಮ್ಮ, ಜಯಪ್ರಭಾ ಎಂದು ಗುರುತಿಸಲಾಗಿದೆ. ಮತ್ತೋರ್ವ ಮಹಿಳೆಯ ಹೆಸರು ತಿಳಿದು ಬಂದಿಲ್ಲ.

 

ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು, ಯಶವಂತಪುರ ಮತ್ತು ಪೀಣ್ಯ ಠಾಣೆಗಳಲ್ಲಿ ತಲಾ ಒಂದು ಘಟನೆ ವರದಿಯಾಗಿದೆ. ಮುಂಜಾನೆ 5.30ರ ಸುಮಾರಿಗೆ ಎಂಇಐ ಲೇಔಟ್‌ನ ಸರ್ವಮಂಗಳದಲ್ಲಿ ದುಷ್ಕರ್ಮಿಗಳು ಮೊದಲು ಮಹಿಳೆಯೊಬ್ಬರ 60 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದು ಮತ್ತು ರಾಮಯ್ಯ ಲೇಔಟ್‌ನಲ್ಲಿ 7.30 ರ ಸುಮಾರಿಗೆ ಪ್ರಿಯಾಲಕ್ಷ್ಮಿ ಎಂಬುವವರಿಂದ 80 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎರಡೂ ಘಟನೆಗಳು ಬಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಸಂದ್ರದಲ್ಲಿ ಲಲಿತಮ್ಮ ಎಂಬುವವರ 45 ಗ್ರಾಂ ತೂಕದ ಚಿನ್ನದ ಸರ ಕಸಿದುಕೊಂಡ ದುಷ್ಕರ್ಮಿಗಳು, ಯಶವಂತಪುರ ಪೊಲೀಸ್ ವ್ಯಾಪ್ತಿಯ ಜೆಪಿ ಪಾರ್ಕ್ ಬಳಿ 9 ಗಂಟೆ ಸುಮಾರಿಗೆ ಜಯಪ್ರಭಾ ಅವರ 50 ಗ್ರಾಂ ಸರ ದೋಚಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top