ಉಡುಪಿ: ಬೈಕ್ ಗೆ ಲಾರಿ ಢಿಕ್ಕಿ ➤ ಸಬ್ ಇನ್ಸ್ ಪೆಕ್ಟರ್ ಮೃತ್ಯು.!

(ನ್ಯೂಸ್  ಕಡಬ) newskadaba.com ಉಡುಪಿ, ಡಿ. 30. ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಮಂಗಳೂರು ಅಬಕಾರಿ ಇಲಾಖೆಯ ಸಬ್ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಉಡುಪಿಯ ಹೊರ ವಲಯದ ಅಂಬಾಗಿನಲ್ಲಿ ವರದಿಯಾಗಿದೆ.

ಮೃತಪಟ್ಟವರನ್ನು ಬ್ರಹ್ಮಾವರದ ಉಳ್ಳೂರಿನ ನಿವಾಸಿ ಅಬಕಾರಿ ಇನ್ ಸ್ಪೆಕ್ಟರ್ ಶಂಕರ್ (53) ಎಂದು ಗುರುತಿಲಾಗಿದೆ. ಇವರು ಮಂಗಳೂರು ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ಮುಗಿಸಿ ತಮ್ಮ ಬೈಕ್ ನಲ್ಲಿ ಉಳ್ಳೂರು ಕಡೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

Also Read  ನರ್ಸರಿಗೆ ಕಾಡಾನೆಗಳು ದಾಳಿ- 3,200ಕ್ಕೂ ಅಧಿಕ ಗಿಡಗಳು ಧ್ವಂಸ

 

 

error: Content is protected !!
Scroll to Top