ಗಾಂಜಾ ಸೇವನೆ ಐವರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಮಣಿಪಾಲ ,  ಡಿ 27 :   ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಆಚಾರ್ಯ ಕಂಪೌಂಡ ಬಳಿ 5 ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದ ಘಟನೆ ಮಣಿಪಾಲದಲ್ಲಿ ವರದಿಯಾಗಿದೆ.

ಬಂಧಿತರನ್ನು ದೀಪಕ್ (23), ಆದಿನಾಥ್ ಎಸ್ ಗಾಣಿಗ (29), ಮೊಹಮ್ಮದಗ ಆಜಯ್(37), ಅನುಪಮ್ (24) ಎಂದು ಗುರುತಿಸಲಾಗಿದೆ.

ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಆಚಾರ್ಯ ಕಂಪೌಂಡ ಬಳಿ ದೀಪಕ್, ಆದಿನಾಥ್ ಎಸ್ ಗಾಣಿಗ, ಶರತ್, ಮೊಹಮ್ಮದ್ ಆಜಮ್, ಅನುಪಮ್ ಎಂಬುವವರು ಮಾದಕ ವಸ್ತು ಸೇವಿಸುತ್ತಿರುವ ಅನುಮಾನದ ಮೇರೆಗೆ ಮಣಿಪಾಲ ಪೊಲೀಸರು ಇವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿದಾಗ ಈ 5 ಮಂದಿ ಕೂಡ ಗಾಂಜಾ ಸೇವಿಸುವುದು ದೃಢಪಟ್ಟಿದ್ದು, ಇವರ ವಿರುದ್ಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

error: Content is protected !!

Join the Group

Join WhatsApp Group