ಯುವಕನ ಅಪಹರಣ – 2 ಲಕ್ಷಕ್ಕೆ ಬೇಡಿಕೆ    ➤ ಮೂವರು ಆರೋಪಿಗಳ ಬಂಧನ           

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.20   ಬಿಹಾರದ ಯುವಕನನ್ನು ಅಪಹರಿಸಿ ರೂ.2 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮೂವರನ್ನು ಬಂಧಿಸಿದ ಘಟನೆ ಯಶವಂತಪುರ ರೈಲು ನಿಲ್ದಾಣದಲ್ಲಿ ಸಂಭವಿಸಿದೆ ಎನ್ನಲಾಗಿದೆ.

ಡಿಪ್ಲೋಮಾ ವಿದ್ಯಾರ್ಥಿ ಎ.ಪ್ರಭಾತ್ (21), ಕುಣಿಗಲ್ ನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ ರಂಗನಾಥ್ (19), ಕೃಷಿಕ ಕುಶಾಲ್ (19) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಕೃತ್ಯ ನಡೆದ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

 

error: Content is protected !!
Scroll to Top