ಅಕ್ರಮ ಪಡಿತರ ಅಕ್ಕಿಯ ವಶ

(ನ್ಯೂಸ್ ಕಡಬ) newskadaba.com ಸಿರುಗುಪ್ಪ , ಡಿ 19 :  ಸಿರುಗುಪ್ಪ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮ ಸಮೀಪದ ಗಡ್ಯಾಳ ಮಾರೆಮ್ಮ ದೇವಸ್ಥಾನದ ಬಳಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ  ಕೆ.ಎ 34, ಎಸ್ 5791 ನಂಬರಿನ ಆಟೋ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಬಂಧಿತನನ್ನು ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ  50 ಕೆಜಿಯ 30 ಚೀಲಗಳಲ್ಲಿ , 14 ಕ್ವಿಂಟಾಲ್ 40 ಕೆಜಿಯ 33,120 ಮೌಲ್ಯದ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ರೇಷ್ಮಾ ಬಾನು ಹಾಗೂ ಆಟೋ ಮಾಲೀಕ ಸೇರಿ ಮೂವರ ವಿರುದ್ಧ ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆಂದು ಆಹಾರ ಶಿರಸ್ತೆದಾರ್ ಮಹಾರುದ್ರ ಗೌಡ ತಿಳಿಸಿದರು.

Also Read  ಬಂಟ್ವಾಳ ತಾಲೂಕಿನ ಗ್ರಾಮಗಳ ಗ್ರಾಮಸಭೆ

error: Content is protected !!
Scroll to Top