ಸಾಗರ : ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ



(ನ್ಯೂಸ್ ಕಡಬ) newskadaba.com ಸಾಗರ , ಡಿ 19 :  ನೇಣು ಬಿಗಿದು ಪದವಿ ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ  ಸಾಗರ ತಾಲೂಕಿನ ಆಚಾಪುರದ ಕೆರೆಹಿತ್ತಲು ಎಂಬಲ್ಲಿ ವರದಿಯಾಗಿದೆ.





ಮೃತನನ್ನು ಗೌತಮ್ (20) ಎಂದು ಗುರುತಿಸಲಾಗಿದೆ. ಈತ ಚಾಪುರ ಕೆರೆಹಿತ್ತಲು ನಿವಾಸಿ ಇವರು ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.






error: Content is protected !!
Scroll to Top