ಭೀಕರ ರಸ್ತೆ ಅಪಘಾತ ➤ ಯುವಕ ಸ್ಥಳದಲ್ಲೇ ಮೃತ್ಯು..!

(ನ್ಯೂಸ್ ಕಡಬ) newskadaba.com  ಕಲಬುರಗಿ , ಡಿ 19 :  ಜೇವರ್ಗಿ ಪಟ್ಟಣದ ಸಮೀಪ ಬೀದರ್-ಬಳ್ಳಾರಿ ರಾಜ್ಯ ಹೆದ್ದಾರಿ 50ರಲ್ಲಿ  ಭೀಕರ ರಸ್ತೆ ಅಪಘಾತ ಸಂಭವಿಸಿದೆ ಪರಿಣಾಮ ಸ್ಥಳದಲ್ಲೇ ಯುವಕಯೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತನ್ನು ಆಕಾಶ ಮಾಹಾದದೇಪ್ಪ ನಾಕ್ಮನ (25) ಎಂದು ಗುರುತಿಸಲಾಗಿದೆ. ಈತ ಜೇವರ್ಗಿ ತಾಲೂಕಿನ ಬಾಬು ಜಗಜೀವನ್ ರಾಮ ನಗರ ನಿವಾಸಿ, ಆಟೋ ಹಾಗೂ ಕ್ರೂಸರ್ ವಾಹನ ಮುಖಾ ಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ  ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Also Read  ಸುಬ್ರಹ್ಮಣ್ಯ: ನೂತನ ಸಚಿವ ಎಸ್.ಅಂಗಾರ ಅವರಿಂದ ಧರ್ಮ ಸಮ್ಮೇಳನ ಉದ್ಘಾಟನೆ

error: Content is protected !!