ಉದ್ಯಮಿಯೋರ್ವನ ಕಿಡ್ನಾಪ್ ➤ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ.10. ಉದ್ಯಮಿಯೋರ್ವನನ್ನು ಕಿಡ್ನಾಪ್ ಮಾಡಿ ಒಂದು ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ.

 

 

 

ಅಪಹರಣಕ್ಕೆ ಒಳಗಾದ ವ್ಯಕ್ತಿಯನ್ನು ಯರಗಟ್ಟಿ ತಾಲೂಕಿನ ಸೊಪ್ಪಡ್ಲ ಗ್ರಾಮದ ಹೋಟೆಲೊಂದರ ಉದ್ಯಮಿ ಸಾಬಣ್ಣ ಮೆಗಾಡಿ ಎಂದು ಗುರುತಿಸಲಾಗಿದೆ. ಇವರನ್ನು ಅಪಹರಣ ಮಾಡಿದ ನಂತರ ಬೆದರಿಕೆ ಹಾಕಿ ಒಂದು ರೂಪಾಯಿ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸಾಬಣ್ಣ ಮೆಗಾಡಿರವರು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರೆಲ್ಲರೂ ಬೆಳಗಾವಿ ಹಾಗೂ ಮೈಸೂರು ಮೂಲದವರಾಗಿದ್ದಾರೆಂದು ತಿಳಿದುಬಂದಿದೆ.

 

Also Read  ಕಾರ್ಕಳ :ಮಹಿಳೆಯ ಚಿನ್ನದ ಸರ ಕಸಿದು ಕಳ್ಳರು ಎಸ್ಕೇಪ್

 

error: Content is protected !!
Scroll to Top