ಕಡಬ: ಸಾಹಿತಿ ಗೋಪಾಲ್ ರಾವ್ ಅವರಿಗೆ ಶ್ರದ್ಧಾಂಜಲಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ನ.13. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಿಧನರಾದ, ಗೋಪಾಲ್ ರಾವ್ ಅವರಿಗೆ ಶ್ರದ್ಧಾಂಜಲಿ ಸಭೆ ಶನಿವಾರ ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಐತ್ತಪ್ಪ ನಾಯ್ಕ್ ಮಾತನಾಡಿ ಗೋಪಾಲ್ ರಾವ್ ಹಾಗೂ ತನ್ನ ಸುಧೀರ್ಘ ಒಡನಾಟದಲ್ಲಿ ನಡೆದ ಸಾಹಿತ್ಯ ಕೃಷಿಯ ಬಗ್ಗೆ ಮೆಲಕು ಹಾಕಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್, ಜಿಲ್ಲಾ ಪಂಚಾಯತಿ ಸದಸ್ಯ ಪಿ.ಪಿ.ವರ್ಗೀಸ್, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ನಿವೃತ್ತ ಮುಖ್ಯಗುರು ಸಾಂತಪ್ಪ ಗೌಡ ಪಿಜಕಳ, ಪ್ರಮುಖರಾದ ಎಸ್.ಅಬ್ದುಲ್ ಖಾದರ್, ಶಿವರಾಮ ಗೌಡ ಎಂ.ಎಸ್, ಪ್ರಿನ್ಸಿಪಾಲ್ ಇ.ಸಿ.ಚೆರಿಯನ್, ಶಿಕ್ಷಕಿ ಗ್ರೇಸಿ ಪಿಂಟೋ, ಸತೀಶ್ ನಾಯಕ್, ಮೊದಲಾದವರು ಮೃತರ ಗುಣಗಾನ ಮಾಡಿದರು.


ವೇದಿಕೆಯಲ್ಲಿ ಗೋಪಾಲ್ ರಾವ್ ಅವರ ಹಿರಿಯ ಪುತ್ರ ಕನ್ನಡ ಚಲನಚಿತ್ರ ನಿರ್ದೆಶಕ ಶರತ್ ರಾವ್, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ಪ್ರೊ|ಎ.ವಿ.ನಾರಾಯಣ, ಹರಿನಾರಾಯಣ ಮಾಡಾವು, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಕೈಕುರೆ ಮೊದಲಾದವರು ಉಪಸ್ಥತರಿದ್ದರು.


ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಜನಾರ್ಧನ ಗೌಡ ಪಣೆಮಜಲು ಪ್ರಸ್ತಾವನೆಗೈದರು. ಅಧ್ಯಕ್ಷ ಮಹಮ್ಮದ್ ಕುಂಞ ಸ್ವಾಗತಿಸಿದರು. ಗ್ರೇಸಿ ಪಿಂಟೋ ವಂದಿಸಿದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಶ್ವನಾಥ ರೈ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.

 

error: Content is protected !!

Join the Group

Join WhatsApp Group