ಜಾತಕದಲ್ಲಿ ದೋಷಗಳು ನಿವಾರಣೆಯಾಗಬೇಕು ಎಂದರೆ ಈ ಒಂದು ವಿಧಾನ ತಿಳಿದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಜಾತಕದಲ್ಲಿ ದೋಷ ಇದ್ದರೆ ವ್ಯಕ್ತಿಯ ಜೀವನ ಬಹಳ ಕಷ್ಟಕರವಾಗಿರುತ್ತದೆ, ವ್ಯಕ್ತಿ ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳು ಕೈಹಿಡಿಯಬೇಕು ಅವನು ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಜಾತಕದಲ್ಲಿ ಗ್ರಹಗಳ ಪಾತ್ರ ಬಹಳ ಪ್ರಮುಖವಾಗಿರುತ್ತದೆ, ಒಂದು ವೇಳೆ ಜಾತಕದಲ್ಲಿ ಗ್ರಹಗಳ ಬಲ ಇಲ್ಲ ಎಂದರೆ ಗ್ರಹಗಳ ದೋಷ ಇದ್ದರೆ ಆಗ ಆ ವ್ಯಕ್ತಿ ಮಾಡುವಂತಹ ಯಾವುದೇ ಕೆಲಸ ಕಾರ್ಯಗಳು ಅವನ ಕೈ ಹಿಡಿಯುವುದಿಲ್ಲ, ಅವನು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಕಷ್ಟದ ಮೇಲೆ ಕಷ್ಟಗಳು ಬರುತ್ತವೆ, ಹಾಗಾಗಿ ಜಾತಕದಲ್ಲಿ ಏನಾದರೂ ದೋಷಗಳು ಇದ್ದರೆ ಮೊದಲು ಅದನ್ನು ನಿವಾರಿಸಿಕೊಳ್ಳಬೇಕು ಇಲ್ಲವಾದರೆ ಅದು ಜೀವನದ ಅಭಿವೃದ್ಧಿಗೆ ಮಾರಕವಾಗುತ್ತದೆ. ಇನ್ನು ಜಾತಕದಲ್ಲಿ ದೋಷ ಇರುವವರು ಒಂದು ಲೋಟದ ನೀರಿನಿಂದ ಈ ರೀತಿ ಮಾಡುವುದರಿಂದ ಜಾತಕ ದೋಷಗಳು ನಿವಾರಣೆಯಾಗುತ್ತದೆ, ಇದರಿಂದ ನೀವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ಅಡೆತಡೆಗಳು ಉಂಟಾಗುವುದಿಲ್ಲ, ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಬಹುದು, ಹಾಗಾದರೆ ಜಾತಕದಲ್ಲಿ ದೋಸೆಗಳು ಇದ್ದರೆ ಒಂದು ಲೋಟದ ನೀರಿನಿಂದ ಯಾವ ರೀತಿಯಾದ ಪರಿಹಾರಗಳನ್ನು ಮಾಡಿಕೊಳ್ಳಬಹುದು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಜಾತಕದಲ್ಲಿ ಗ್ರಹ ದೋಷ ಇರುವವರು ರಾತ್ರಿ ಮಲಗುವ ಸಮಯದಲ್ಲಿ ತಲೆದಿಂಬಿನ ಬದಿಯಲ್ಲಿ ಒಂದು ತಾಮ್ರದ ಲೋಟದಲ್ಲಿ ನೀರನ್ನು ಇಟ್ಟುಕೊಂಡು ಮಲಗಬೇಕು, ನಂತರ ಬೆಳಗ್ಗೆ ಎದ್ದ ತಕ್ಷಣ ಏಳು ಬಾರಿ ಆ ಲೋಟವನ್ನು ನೀರಿನ ಸಮೇತ ತಲೆಗೆ ಸುತ್ತಿಸಿದ ನಂತರ ಆ ನೀರನ್ನು ಒಂದು ಮುಳ್ಳಿನ ಗಿಡಕ್ಕೆ ಹಾಕಬೇಕು, ನಿಮ್ಮ ಮನೆಯ ಬಳಿ ಮುಳ್ಳಿನ ಗಿಡ ಇಲ್ಲ ಎಂದಾದರೆ ಬೇರೆ ಯಾವುದಾದರೂ ಗಿಡದ ಬುಡಕ್ಕೂ ಸಹ ಹಾಕಬಹುದು, ಈ ರೀತಿ ಮಾಡುವುದರಿಂದ ಗ್ರಹ ದೋಷದ ಪರಿಣಾಮಗಳು ಕಡಿಮೆಯಾಗುತ್ತವೆ. ಇನ್ನು ಎರಡನೆಯದಾಗಿ ಗ್ರಹ ದೋಷ ಇರುವವರು ಪ್ರತಿನಿತ್ಯ ಬೆಳಗ್ಗೆ ಸ್ನಾನ ಮಡಿಗಳನ್ನು ಮಾಡಿದ ನಂತರ ತಾಮ್ರದ ಲೋಟದಿಂದ ಒಂದು ಲೋಟ ನೀರನ್ನು ತೆಗೆದುಕೊಂಡು ಹೋಗಿ ಶಿವನಿಗೆ ಅರ್ಪಿಸುವುದರಿಂದ ನಿಮಗೆ ಇರುವಂತಹ ಗ್ರಹ ದೋಷಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ, ಇದರ ಜೊತೆಗೆ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ, ಹಾಗಾಗಿ ಯಾರಿಗೆ ಗ್ರಹದೋಷಗಳ ಇರುವವರು ತಪ್ಪದೆ ಪ್ರತಿನಿತ್ಯ ಒಂದು ಲೋಟ ನೀರನ್ನು ಶಿವಲಿಂಗಕ್ಕೆ ಅರ್ಪಿಸಿ. ಇನ್ನು ಮೂರನೆಯದಾಗಿ ಗ್ರಹ ದೋಷ ಇರುವವರು ತಪ್ಪದೆ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು, ಒಂದೇ ಲೋಟದಲ್ಲಿ ಅಂದರೆ ತಾಮ್ರದ ಲೋಟದ ತುಂಬಾ ನೀರನ್ನು ತೆಗೆದುಕೊಂಡು ಅದರ ಒಳಗಡೆ ಕುಂಕುಮ ಕೆಂಪು ಹೂವು ಮತ್ತು ಅಕ್ಷತೆ ಕಾಳುಗಳನ್ನು ಹಾಕಿಕೊಂಡು ಸೂರ್ಯದೇವನಿಗೆ ಅರ್ಘ್ಯಯನ್ನು ಸಲ್ಲಿಸಬೇಕು, ಇದರಿಂದ ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಗ್ರಹ ದೋಷದ ಪರಿಣಾಮಗಳು ಕಡಿಮೆಯಾಗುತ್ತವೆ. ಇನ್ನು ಅರಳಿ ಮರದ ಬುಡಕ್ಕೆ ಪ್ರತಿನಿತ್ಯವೂ ತಾಮ್ರದ ಲೋಟದಿಂದ ನೀರನ್ನು ಹಾಕಿದರೆ ಗ್ರಹ ದೋಷಗಳು ನಿವಾರಣೆಯಾಗುತ್ತದೆ, ಅರಳಿ ಮರದಲ್ಲಿ ವಿಶೇಷವಾಗಿ ತ್ರಿಮೂರ್ತಿಗಳ ವಾಸ ವಿರುತ್ತದೆ ಅದೇ ರೀತಿಯಾಗಿ ಮಹಾಲಕ್ಷ್ಮಿ ದೇವಿಯವರ ಇರುತ್ತದೆ ಎಂದು ಹೇಳಲಾಗುತ್ತದೆ ಇವರ ಆಶೀರ್ವಾದದಿಂದ ನಿಮಗೆ ಇರುವಂತಹ ಗ್ರಹ ದೋಷಗಳು ನಿವಾರಣೆಯಾಗುತ್ತದೆ.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!

Join the Group

Join WhatsApp Group