ವಯಸ್ಸಾದರೂ ಕಂಕಣಭಾಗ್ಯ ಕೂಡಿ ಬರಲಿಲ್ಲ ಅಂದರೆ ಈ ನಿಯಮ ಪಾಲಿಸಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

, ಎಷ್ಟೋ ಜನರಿಗೆ ವಯಸ್ಸಾದರೂ ಕಂಕಣಭಾಗ್ಯ ಕೂಡಿ ಬಂದಿರುವುದಿಲ್ಲ, ಕೆಲವೊಮ್ಮೆ ಗಂಡು ಅಥವಾ ಹೆಣ್ಣು ಸರಿಯಾಗಿ ಸಿಗದೆ ಇರುವುದು, ಅಥವಾ ಜಾತಕಗಳು ಹೊಂದಾಣಿಕೆ ಆಗದೆ ಇರುವುದು, ಮದುವೆ ಮಾತುಕತೆಗಳು ಅರ್ಧಕ್ಕೆ ಮುರಿದು ಬೀಳುವುದು, ಸಂಬಂಧಗಳು ಏರ್ಪಟ್ಟು ಮದುವೆಯವರೆಗೂ ಬಂದು ಅದು ನಿಂತುಹೋಗುವುದು, ಈ ರೀತಿಯಾಗಿ ಮದುವೆ ವಿಷಯದಲ್ಲಿ ಹಲವಾರು ಅಡೆತಡೆಗಳು ಉಂಟಾಗಿ ಮದುವೆ ಕಾರ್ಯ ಎಂಬುವುದೇ ಏರ್ಪಟ್ಟಿರುವುದಿಲ್ಲ. ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಮುಖ್ಯವಾಗಿ ಜಾತಕ ದೋಷಗಳು ಎಂದು ಹೇಳಲಾಗುತ್ತದೆ, ಜಾತಕದಲ್ಲಿ ಏನಾದರೂ ಕುಜದೋಷ ನಾಗ ಸರ್ಪದೋಷಗಳು ಇದ್ದರೆ ಆಗ ಮದುವೆ ಕಾರ್ಯಗಳು ನಡೆಯುವುದಿಲ್ಲ, ಇದು ಕಂಕಣ ಭಾಗ್ಯಕ್ಕೆ ಅಡ್ಡಿಯನ್ನು ಉಂಟು ಮಾಡುತ್ತಿರುತ್ತದೆ, ಹಾಗಾಗಿ ಮೊದಲು ಇಂತಹ ದೋಷಗಳನ್ನು ನಿವಾರಣೆ ಮಾಡಿಕೊಂಡು ನಂತರ ಮದುವೆ ಕಾರ್ಯಗಳನ್ನು ಆರಂಭಿಸಿದರೆ ಆಗಾಗ ಬಗ್ಗೆ ಕೂಡಿಬಂದು ಮದುವೆ ಕಾರ್ಯಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ಜಾತಕದಲ್ಲಿರುವ ದೋಷಗಳನ್ನು ನಿವಾರಣೆ ಮಾಡಿಕೊಂಡು ಕಂಕಣಭಾಗ್ಯ ಕೂಡಿ ಬರಬೇಕು ಎಂದರೆ ಯಾವ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಮಹಿಳೆಯರು 8 ಮಂಗಳವಾರಗಳು ಗೌರಿ ದೇವಿಗೆ ಪೂಜೆ ಮಾಡಿ ಸುಮಂಗಲಿಯರಿಗೆ ಕೆಂಪು ಬಣ್ಣದ ವಸ್ತುಗಳನ್ನು, ಮಂಗಳಕರ ವಸ್ತುಗಳು, ಮಣ್ಣಿನ ದೀಪಗಳು, ತಾಂಬೂಲವನ್ನು ನೀಡಿ ಅವರ ಆಶೀರ್ವಾದ ತೆಗೆದುಕೊಳ್ಳಬೇಕು. ಇನ್ನು ಕುಜ ದೋಷ ಇರುವವರು ಪ್ರತಿದಿನ ಸಾಯಂಕಾಲದ ಸಮಯದಲ್ಲಿ ದಕ್ಷಿಣ ದಿಕ್ಕಿನಲ್ಲಿ 3 ಬತ್ತಿಯಿಂದ ದೀಪಾರಾಧನೆ ಮಾಡಿ ಅಂಗಾರಕ ಸ್ತೋತ್ರ ಅಥವಾ ಜಪವನ್ನು ಮಾಡಿದರೆ ಕುಜಗ್ರಹದ ದೋಷ ನಿವಾರಣೆಯಾಗುತ್ತದೆ. ಇನ್ನು ಸ್ತ್ರೀಯರು ಪ್ರತಿ ತಿಂಗಳಿನಲ್ಲಿ ಅವರ ಜನ್ಮ ನಕ್ಷತ್ರದ ದಿನದಂದು ಸುಬ್ರಮಣ್ಯ ಸ್ವಾಮಿಗೆ ಹಾಲಿನಿಂದ ಅಭಿಷೇಕ ಮಾಡಬೇಕು, ಇದರ ಜೊತೆಗೆ ದುರ್ಗಾ ದೇವಿಗೆ ಸಪ್ತ ಸ್ತುತಿ ಸ್ತೋತ್ರಗಳನ್ನು ಪಠಿಸುತ್ತಾ ಕುಂಕುಮ ಅರ್ಚನೆ ಮಾಡುವುದರಿಂದ ದೋಷ ನಿವಾರಣೆಯಾಗುತ್ತದೆ. ಇನ್ನು ಪ್ರತಿ ಮಂಗಳವಾರ 6 ಬಾಳೆ ಎಲೆಗಳ ಮೇಲೆ ಅಕ್ಕಿ ಹಾಕಿ ಅದರ ಮೇಲೆ ತುಪ್ಪದ ದೀಪ ಹಚ್ಚಿ ದೀಪಾರಾಧನೆ ಮಾಡಿ ಪೂಜೆಯನ್ನು ಮಾಡಬೇಕು, ಇದರ ಜೊತೆಗೆ ಸ್ಕಂದ ಕವಚ ಪಾರಾಯಣ ಮಾಡಿ ಆರಾಧಿಸಿದರೆ ದೋಷದಿಂದ ವಿಮುಕ್ತಿ ಹೊಂದಬಹುದು, ಈ ರೀತಿಯಾಗಿ ಈ ಒಂದು ಪೂಜೆಯನ್ನು 18 ಮಂಗಳವಾರ ಮಾಡಬೇಕು. ಇನ್ನು ಕೆಂಪು ಬಣ್ಣದ ಕರವಸ್ತ್ರವನ್ನು ನಮ್ಮ ಹತ್ತಿರ ಯಾವಾಗಲೂ ಇಟ್ಟುಕೊಳ್ಳಬೇಕು, ಇದರಿಂದ ಪೂಜಾ ದೋಷಗಳು ನಿವಾರಣೆಯಾಗುತ್ತದೆಯಾಕೆಂದರೆ ಕೆಂಪು ಬಣ್ಣ ಎಂದರೆ ಕುಜನಿಗೆ ಬಹಳ ಇಷ್ಟ. ಇನ್ನು ಸಾಧ್ಯವಾದಷ್ಟು ಹಸುಗಳಿಗೆ ಚಪಾತಿಯ ಜೊತೆ ಬೆಲ್ಲವನ್ನು ಸೇರಿಸಿ ತಿನ್ನಿಸುತ್ತಾ ಬರಬೇಕು ಇದರಿಂದ ಕಂಕಣ ಭಾಗ್ಯ ಶೀಘ್ರವಾಗಿ ಲಭಿಸುತ್ತದೆ. ಈ ರೀತಿಯಾದ ಪರಿಹಾರಗಳನ್ನು ಜೀವನದಲ್ಲಿ ಮಾಡುತ್ತಾ ಬರುವುದರಿಂದ ಜಾತಕದಲ್ಲಿರುವ ಕುಜ ದೋಷಗಳು ನಿವಾರಣೆಯಾಗುತ್ತದೆ, ಇದರಿಂದ ಶೀಘ್ರವಾಗಿ ಕಂಕಣಭಾಗ್ಯ ಕೂಡಿ ಬರುತ್ತದೆ, ಈ ಕೆಲವು ಪರಿಹಾರಗಳಲ್ಲಿ ನಿಮಗೆ ಯಾವುದು ಅನುಕೂಲಕರವಾಗಿ ಇರುತ್ತದೆಯೋ ಅವುಗಳನ್ನು ಕ್ರಮೇಣವಾಗಿ ಮಾಡಿಕೊಂಡು ಬರುವುದರಿಂದ ನಿಮ್ಮ ವಿವಾಹಕ್ಕೆ ಎದುರಾಗುತ್ತಿರುವ ಸಮಸ್ಯೆಗಳು ದೂರವಾಗುತ್ತವೆ, ಜಾತಕದ ದೋಷಗಳು ನಿವಾರಣೆಯಾಗುತ್ತದೆ ಕಂಕಣಭಾಗ್ಯ ಕೂಡಿ ಬರುತ್ತದೆ.

Also Read  ಖ್ಯಾತ ಬಂಗಾಳಿ ನಟ ಸೌಮಿತ್ರಾ ಚಟರ್ಜಿ ವಿಧಿವಶ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top