ಉಡುಪಿ: ಕೆಸರಿನಲ್ಲಿ ಹೂತು ಹೋದ ಕೃಷಿ ಸಚಿವರ ಕಾರು!

(ನ್ಯೂಸ್ ಕಡಬ) newskadaba,ಉಡುಪಿ ಜೂ.26: ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹಡಿಲು ಭೂಮಿ ಕೃಷಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮಳೆಗೆ ತೇವಗೊಂಡಿದ್ದ ಗದ್ದೆಯಲ್ಲಿ ಕೃಷಿ ಸಚಿವರ ಕಾರು ಹೂತು ಹೋದ ಘಟನೆ ನಡೆಯಿತು.

ಕೆಸರಿನಿಂದ ಕಾರು ಮೇಲೆತ್ತಲು ಕೆಲ ಕಾಲ ಪರದಾಟ ಮಾಡಿದ ಪ್ರಸಂಗ ನಡೆಯಿತು. ಉಡುಪಿಯ ಕಡೆಕಾರು ಎಂಬಲ್ಲಿ ಈ ಘಟನೆ ನಡೆದಿದೆ. ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಯುವಕರು ಸಚಿವರ ಕಾರನ್ನು ಮೇಲಕ್ಕೆ ಎತ್ತಲು ಸಹಾಯ ಮಾಡಿದರು.

error: Content is protected !!

Join the Group

Join WhatsApp Group