ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಕಂಟೇನರ್ ಲಾರಿ ➤ ಓರ್ವ ಮೃತ್ಯು, ಕ್ಲೀನರ್ ನಾಪತ್ತೆ

(ನ್ಯೂಸ್ ಕಡಬ) newskadaba,ಮಂಗಳೂರು ಜೂ.21:ನಗರದ ಎನ್​​ಎಂಪಿಟಿಯಲ್ಲಿ ನಿಯಂತ್ರಣ ತಪ್ಪಿದ ಕಂಟೇನರ್ ಲಾರಿ ನೀರಿಗೆ ಬಿದ್ದ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು ಮತ್ತೋರ್ವ ನಾಪತ್ತೆಯಾಗಿದ್ದಾನೆ.

ಮಂಗಳೂರಿನ ಎನ್​​ಎಂಪಿಟಿ ಬಂದರಿನಲ್ಲಿ ಹಡಗಿನಲ್ಲಿ ಬರುವ ಸರಕು ಸಾಮಗ್ರಿಗಳ ಸಾಗಣೆ ಕಂಟೇನರ್ ಲಾರಿಗಳು ಬಂದರ್​​ನ ವರೆಗೆ ಬರುತ್ತದೆ. ಹೀಗೆ ಬಂದ ಡೆಲ್ಟಾ ಕಂಪೆನಿಯ 10 ಚಕ್ರದ ಕಂಟೇನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದೆ. ನವಮಂಗಳೂರು ಬಂದರಿನ 14 ನೇ ಬರ್ತ್​ನಲ್ಲಿ ಈ ಘಟನೆ ನಡೆದಿದೆ.ಲಾರಿಯಲ್ಲಿದ್ದ ಚಾಲಕ ರಾಜೇಸಾಬ (26) ಮೃತಪಟ್ಟಿದ್ದು, ಭೀಮಪ್ಪ (22) ಎಂಬ ಮತ್ತೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಭಾನುವಾರ ರಾತ್ರಿ 10.30 ಕ್ಕೆ ಈ ಘಟನೆ ನಡೆದಿದ್ದು, ಕಂಟೇನರ್ ನೀರಿಗೆ ಬೀಳುವ ಸಂದರ್ಭದಲ್ಲಿ ಅದು ಖಾಲಿಯಿತ್ತು. ಈ ಸಂದರ್ಭ ಅಲ್ಲಿ ಹೋಗುತ್ತಿದ್ದ ಟಗ್ ಬೋಟ್ ಸಿಬ್ಬಂದಿ ಮಾಹಿತಿ ನೀಡಿದ್ದು ರಾತ್ರಿಯೇ ಸಿಐಎಸ್ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.ರಾತ್ರಿ 11.30ಕ್ಕೆ ರಾಜೇಸಾಬ ದೇಹ ಸಿಕ್ಕಿದ್ದು ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಆತ ಮೃತಪಟ್ಟಿರುವುದು ದೃಢಪಟ್ಟಿದೆ. ಕಂಟೇನರ್ ಟ್ರಕ್​​ನಲ್ಲಿದ್ದ ಭೀಮಪ್ಪ ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

error: Content is protected !!

Join the Group

Join WhatsApp Group