ಮಂಗಳೂರು: ಹೋಟೆಲ್ ಶೌಚಾಲಯ ಬಳಕೆಕೆ ಆಕ್ಷೇಪಣೆ ► ತಂಡದಿಂದ ಮಾರಣಾಂತಿಕ ಹಲ್ಲೆ

 (ನ್ಯೂಸ್ ಕಡಬ) newskadaba.com ಮಂಗಳೂರು, ಅ.13. ಹೋಟೆಲ್ ನ ಶೌಚಾಲಯವನ್ನು ಉಪಯೋಗಿಸಲು ಆಕ್ಷೇಪಿಸಿದ ಹೋಟೆಲ್ ಮ್ಯಾನೇಜರ್ ಗೆ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಸರ್ಕಾರಿ ಬಸ್ ನಿಲ್ದಾಣದ ಮುಂದಿರುವ ಪಂಚಮಿ ಹೋಟೆಲ್ ಶೌಚಾಲಯವನ್ನು ಸಮೀಪದ ಮೊಬೈಲ್ ಸರ್ವಿಸ್ ಅಂಗಡಿಯ ಸಿಬ್ಬಂದಿಗಳು ಬಳಸುತ್ತಿದ್ದುದನ್ನು ಆಕ್ಷೇಪಿಸಿದ ಹೋಟೆಲ್ ಮ್ಯಾನೇಜರ್ ಪ್ರಸನ್ನ ಎಂಬುವರ ಮೇಲೆ ಆರು ಮಂದಿ ಯುವಕರ ತಂಡವೊಂದು ದಾಳಿ ನಡೆಸಿದೆ.

ತಡೆಯಲು ತೆರಳಿದ ಸೆಕ್ಯೂರಿಟಿ ಸಿಬ್ಬಂದಿಗೆ ಮೇಲೂ ತಂಡ ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ಹೋಟೆಲ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಜನ ಸೇರಿದ್ದಾರೆ. ಹಲ್ಲೆ ನಡೆಸಿದ ತಂಡದ ವಿರುದ್ಧ ಸ್ಥಳೀಯ ಅಂಗಡಿಯವರು ತಿರುಗಿಬಿದ್ದಾರೆ. ಏಕಾಏಕಿ ಹೋಟೆಲ್ ಗೆ ನುಗ್ಗಿ ಹಲ್ಲೆ ನಡೆಸಲು ಇದೇನು ಪಾಕಿಸ್ತಾನವೇ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಯುತ್ತರವಾಗಿ  ಹೌದು ಇದು ಪಾಕಿಸ್ತಾನ ಎಂದು ಹೇಳಿ ಯುವಕರ ತಂಡ ಸ್ಥಳದಿಂದ ಕಾಳ್ಗಿತ್ತಿದ್ದಾರೆ. ಹಲ್ಲೆ ನಡೆಸಿದ ಪರಾರಿಯಾಗುತ್ತಿದ್ದ ಹಾಗೆ ತಂಡದ ಓರ್ವ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರ್ವ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

error: Content is protected !!

Join the Group

Join WhatsApp Group