ಅಜೆಕಾರು: ಅರ್ಬಿ‌ ಫಾಲ್ಸ್ ನಲ್ಲಿ ಮುಳುಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಅಜೆಕಾರು, ಡಿ. 21. ನೀರಿನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳದ ಕೆರ್ವಾಶೆಯ ಸಮೀಪದ ಅರ್ಬಿ ಫಾಲ್ಸ್ ನಲ್ಲಿ ನಡೆದಿದೆ.

ಮೃತ ಯುವಕನನ್ನು ಕಿರಣ್ (21) ಎಂದು ಗುರುತಿಸಲಾಗಿದೆ. ಐದು ಮಂದಿ ಗೆಳೆಯರ ತಂಡವು ಭಾನುವಾರದಂದು ಅರ್ಬಿ ಫಾಲ್ಸಿಗೆ ಭೇಟಿ ನೀಡಿದ್ದರು. ಈ ವೇಳೆ ಗೆಳೆಯರೆಲ್ಲ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ತಾನು ಟಾಯ್ಲೆಟ್ ಹೋಗಿ ಬರುವುದಾಗಿ ಹೇಳಿ ನೀರಿನ ಇನ್ನೊಂದು ಬದಿಗೆ ಹೋಗಿದ್ದು, ಸುಮಾರು ಹೊತ್ತಾದರೂ ಹಿಂದಿರುಗದೇ ಇದ್ದುದ್ದರಿಂದ ಗೆಳೆಯರು ಎಲ್ಲಾ ಕಡೆ ಹುಡುಕಾಡಿದರೂ ಎಲ್ಲೂ ಕಿರಣ್ ಪತ್ತೆಯಾಗಿಲ್ಲ. ಈ ಬಗ್ಗೆ ಹತ್ತಿರದ ಮನೆಯ ಸುನೀಲ್ ಶೆಟ್ಟಿ ಎಂಬವರಿಗೆ ತಿಳಿಸಿ, ಅವರ ಪರಿಚಯಸ್ಥರ ಜೊತೆ ಹುಡುಕಾಡಿ, ನಂತರ ಮುಳುಗು ತಜ್ಞರನ್ನು ಕರೆತಂದು ನೀರಿನಲ್ಲಿ ಹುಡುಕಾಟ ನಡೆಸಿ ರಾತ್ರಿ ವೇಳೆಗೆ ಕಿರಣ್ ಅವರ ದೇಹವನ್ನು ಮೇಲಕ್ಕೆತ್ತಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕುಮಾರಸ್ವಾಮಿಯನ್ನು ಮಣಿಸಲು ಬಿಜೆಪಿಯಿಂದ ಕಣಕ್ಕಿಳಿದ ಯೋಗೇಶ್ವರ್‌..!​

error: Content is protected !!
Scroll to Top