ಗುಂಡ್ಯ: ಅಕ್ರಮ ಮರ ಸಾಗಾಟ ➤ ಲಾರಿ ಸಹಿತ ಓರ್ವ ಸೆರೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.21: ಅಕ್ರಮವಾಗಿ ಮರ ಸಾಗಾಟದಲ್ಲಿ ತೊಡಗಿದ್ದ ಓರ್ವನ ಸಹಿತ ಲಾರಿ ಹಾಗೂ ಮರವನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಉಪ್ಪಿನಂಗಡಿ ಸಮೀಪದ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ಪ್ರಕರಣ ಪತ್ತೆ ಹಚ್ಚಿದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಿಸಿ ಆರೋಪಿಯನ್ನು ಬಂಧಿಸಿದೆ. ಬಂಧಿತನನ್ನು ಸಕಲೇಶಪುರದ ನಿವಾಸಿ ಉಣ್ಣಿಕೃಷ್ಣನ್ ಎಂದು ತಿಳಿದು ಬಂದಿದ್ದು, ಈತ ಸಕಲೇಶಪುರದಿಂದ ಮಂಗಳೂರಿಗೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಕೊಕ್ಕಡ ಶಾಖೆಯ ಉಪವಲಯ ಅರಣ್ಯಾಧಿಕಾರಿ ಕೆ.ಆರ್. ಅಶೋಕ್, ಬಂದಾರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರಾಯಣ್ಣ ಗೌಡ ಪಾಟೀಲ್, ಅರಣ್ಯ ವೀಕ್ಷಕ ರಸೂಲ್ ಸಾಬ್ ಸಕಾನದಗಿ, ನಾಗಲಿಂಗ ಬಡಿಗೇರ, ದಿನೇಶ್, ವಾಹನ ಚಾಲಕ ರವಿ ಭಾಗವಹಿಸಿದ್ದರು.

Also Read  ನವಿಲು ಸಾಂಬರ್ ರೆಸಿಪಿ ವೈರಲ್..! ಯೂಟ್ಯೂಬರ್ ಅರೆಸ್ಟ್

 

error: Content is protected !!
Scroll to Top