ಮರ್ದಾಳ: ಮಿತ್ತೋಡಿಯಲ್ಲಿ ಪ್ರಯಾಣಿಕರ ಬಸ್ ತಂಗುದಾಣ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.11. ಮರ್ದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತೋಡಿ ಬೊಳ್ಳೂರು ಕ್ರಾಸ್ ಎಂಬಲ್ಲಿ ಪಂಚಾಯತಿನ 14ನೇ ಹಣಕಾಸು ಯೋಜನೆಯಲ್ಲಿ ನಿರ್ಮಿಸಿದ ಪ್ರಯಾಣಿಕರ ಬಸ್ ತಂಗುದಾಣದ ಉದ್ಘಾಟನೆ ಮಂಗಳವಾರ ನಡೆಯಿತು.

ಮರ್ದಾಳ ಗ್ರಾಮ ಪಂಚಾಯಿತಿ ಲಲಿತಾ ರೈ ಮೈಕಾಜೆ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭ ಎ.ಪಿ.ಎಂ.ಸಿ. ನಿರ್ದೇಶಕರಾದ ಮೇದಪ್ಪ ಗೌಡ ಡೆಪ್ಪುಣಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜರ್ನಾಧನ ಗೌಡ ಪುತ್ತಿಲ, ಗ್ರಾ.ಪಂ ಉಪಾಧ್ಯಕ್ಷೆ ಲತಾ ಕೆ.ಎಸ್, ಸದಸ್ಯರಾದ ಹರೀಶ್ ಕೋಡಂದೂರು, ದಾಮೋದರ ಡೆಪ್ಪುಣಿ, ಸುಲೈಮಾನ್ ಪಿ., ಮೀನಾಕ್ಷಿ ಆಚಾರ್ಯ, ಸುಶೀಲಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಕಾರ್ಯದರ್ಶಿ ವೆಂಕಟರಮಣ ಗೌಡ, ಲೆಕ್ಕ ಸಹಾಯಕ ಭುವನೇಂದ್ರ ಕುಮಾರ್, ಸಿಬ್ಬಂದಿ ಹಸನ್ ಕೆ., ಗುತ್ತಿಗೆದಾರ ಪ್ರಕಾಶ್ ಎನ್.ಕೆ., ಕಡಬ ಮೆಸ್ಕಾಂ ಇಲಾಖೆಯ ಉದ್ಯೋಗಿ ಉದಯ ಭಟ್ ಕಜೆಮೂಲೆ, ಪದ್ಮನಾಭ ರೈ ಮಿತ್ತೋಡಿ ಉಪಸ್ಥಿತರಿದ್ದರು.

error: Content is protected !!
Scroll to Top