ಮಂಗಳೂರು :ಕೆಎಂಎಫ್ ಡೈರಿಯಲ್ಲಿ ಕೆಮಿಕಲ್ ಸ್ಫೋಟ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಡೈರಿಯಲ್ಲಿ ಕೆಎಂಎಫ್ ಡೈರಿಯಲ್ಲಿ ಕೆಮಿಕಲ್ ಸ್ಫೋಟಗೊಂಡ ಘಟನೆ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭ ಬಿಸಿನೀರು ಮೈಗೆ ತಗುಲಿ ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ.

 

ಸುಳ್ಯ ಮೂಲದ ಸತೀಶ್(27) ಎಂಬವರು ಮಧ್ಯಾಹ್ನದ ವೇಳೆಗೆ ಕಾಸ್ಟಿಕ್ ಸೋಡಾವನ್ನು ನೀರಿಗೆ ಸೇರಿಸಿ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಬಿಸಿನೀರು ಮೈಮೇಲೆ ಬಿದ್ದಿದೆ. ಪರಿಣಾಮವಾಗಿ ಅವರ ದೇಹದ ಶೇ.50ರಷ್ಟು ಭಾಗ ಸುಟ್ಟು ಹೋಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕ್‍ನ್ನು ಸೋಡಾ ಮಾದರಿಯ ವಸ್ತುವನ್ನು ಬೆರೆಸಿ ಸ್ವಚ್ಛಗೊಳಿಸುವಾಗ ಬಿಸಿನೀರು ಮೈಮೇಲೆ ಬಿದ್ದು ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸತೀಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಉಳ್ಳಾಲ: ಎಸ್ಡಿಪಿಐ ಮುಖಂಡನಿಂದ ಮಹಿಳೆಗೆ ಲೈಂಗಿಕ ಕಿರುಕುಳ..! ➤ ಪ್ರಕರಣ ದಾಖಲು

 

error: Content is protected !!
Scroll to Top