ಮಂಗಳೂರು: ಇಬ್ಬರು ಬೈಕ್ ಕಳ್ಳರು ಅರೇಷ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಕಳವುಗೈದ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ಪಾಂಡೇಶ್ವರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

 

ಸ್ಥಳೀಯ ನಿವಾಸಿಗಳಾದ  ಮೊಹಮ್ಮದ್ ಸಫ್ವಾನ್, ಸೈಫುಲ್ಲಾ ಫರಾಜ್ ಬಂಧಿತರು. ಪಾಂಡೇಶ್ವರ ಠಾಣಾ ಉಪ ನಿರೀಕ್ಷಕ ಅನಂತ ಮುರ್ಡೇಶ್ವರ್ ಸಿಬ್ಬಂದಿಯೊಂದಿಗೆ ರೌಂಡ್ಸ್ ಮಾಡುತ್ತಿದ್ದಾಗ ಬೆಳಗಿನ ಜಾವ 3 ಗಂಟೆ ವೇಳೆಗೆ ಮಂಗಳೂರು ದಕ್ಷಿಣ ದಕ್ಕೆಯಲ್ಲಿ ಬೈಕ್ ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಆರೋಪಿಗಳ ಸಹಿತ ಬೈಕ್‌ನ್ನು ವಶ ಪಡಿಸಿರುವ ಪೊಲೀಸರು, ಪ್ರಕರಣ ದಾಖಲಿಸಿದ್ದು, ಬೈಕ್‌ನ್ನು ಸುರತ್ಕಲ್ ಬಳಿ ಕಳವು ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

Also Read  ಕಡಬಕ್ಕೆ ನೂತನ ತಹಸೀಲ್ದಾರ್ ನೇಮಕಗೊಳಿಸಿದ ಸರಕಾರ

 

 

error: Content is protected !!
Scroll to Top