ಉಡುಪಿ : ಕೃಷ್ಣಾ ಮಠದ ಪೂರ್ವಭಾವಿ ಬಾಳೆ ಮುಹೂರ್ತ ಸಂಭ್ರಮ

(ನ್ಯೂಸ್ ಕಡಬ) newskadaba.com ಉಡುಪಿ ನ. 30: ಉಡುಪಿಯ‌ ಅಷ್ಟಮಠಗಳಲ್ಲೊಂದಾದ ಕೃಷ್ಣಾಪುರ ಮಠದ‌ ಶ್ರೀವಿದ್ಯಾಸಾಗರತೀರ್ಥ‌‌ ಶ್ರೀಪಾದರು 2022, ಜ.18ರಂದು ನಾಲ್ಕನೇ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ.

ಇದರ ಪೂರ್ವಭಾವಿಯಾಗಿ ನಾಲ್ಕರಲ್ಲಿ ಮೊದಲ‌ ಮುಹೂರ್ತವಾಗಿ ಬಾಳೆ ಮುಹೂರ್ತವು ಸೋಮವಾರ ಬೆಳಗ್ಗೆ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠದ ಶ್ರೀ‌ವಿದ್ಯಾಸಾಗರತೀರ್ಥ ಶ್ರೀಪಾದರು, ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತಿತರರ ಉಪಸ್ಥಿತಿಯಲ್ಲಿ ನಡೆಯಿತು.

error: Content is protected !!

Join the Group

Join WhatsApp Group