ಕಾರ್ಕಳ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಕಾರ್ಕಳ . 29: ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಆಸ್ಪತ್ರೆ ಹತ್ತಿರ ಮೇಯಲು ಬಿಟ್ಟಿದ ದನವೊಂದು ಆಕಸ್ವಿಕವಾಗಿ ಆವರಣವಿಲ್ಲದ ಬಾವಿಗೆ ಬಿದ್ದು ಗಾಯಗೊಂಡಿದೆ.

 

 

ಮಾಹಿತಿ ತಿಳಿದ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಧಾವಿಸಿ ಯಶಸ್ವಿ ಕಾರ್ಯಚರನೆ ನಡೆಸಿ ದನವನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲೆಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಠಾಣಧಿಕಾರಿ ಬಿ.ಎಂ ಸಂಜೀವ, ರೂಪೇಶ್, ಸಿಬ್ಬಂದಿಗಳಾದ ಸುರೇಶ್, ಜಯ ಮೂಲ್ಯ, ಗೃಹ ರಕ್ಷಕ ದಳದ ಮನ್ಮಥ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

 

error: Content is protected !!

Join the Group

Join WhatsApp Group