ನಗರದಲ್ಲಿ ಮತ್ತೊಂದು ‘ಉರ್ದುವಿನಲ್ಲಿ ಕಾಣಿಸಿಕೊಂಡ ಉಗ್ರ’ ಬರಹ

(ನ್ಯೂಸ್ ಕಡಬ) newskadaba.com ಮಂಗಳೂರು . 29: ಉಗ್ರ ಸಂಘಟನೆ ಪರ ಜೈಕಾರ ಘೋಷಣೆ ಬರಹ ಕಾಣಿಸಿಕೊಂಡ ಎರಡೇ ದಿನಗಳ ಅಂತರದಲ್ಲಿ ನಗರದ ಕೋರ್ಟ್ ಆವರಣದಲ್ಲಿ ಮತ್ತೊಂದು ಇಂತಹದ್ದೇ ಬರವಣಿಗೆ ಕಾಣಿಸಿಕೊಂಡಿದೆ. ಈ ಬಾರಿ ಉರ್ದುವಿನಲ್ಲಿ ಕಾಣಿಸಿಕೊಂಡ ಬರವಣಿಗೆಯಲ್ಲಿ ‘ಪ್ರವಾದಿಗೆ ಕೋಪ ಬಂದರೆ ದೇಹದಿಂದ ತಲೆ ಬೇರ್ಪಡುವುದು’ ಅನ್ನೋ ಅರ್ಥದಲ್ಲಿ ಮತ್ತದೇ ಕಪ್ಪು ಬಣ್ಣದ ಸ್ಪ್ರೇ ಪೇಂಟ್ ಬಳಿದು ಈ ಕೃತ್ಯ ನಡೆಸಲಾಗಿದೆ.

 

ಕಳೆದ ದಿನ ಸಂಜೆ ವೇಳೆಗೆ ಈ ಕೃತ್ಯ ಗಮನಕ್ಕೆ ಬಂದಿದ್ದು, ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಿಳಿಯ ಬಣ್ಣ ಬಳಿದು ಅಳಿಸಿ ಹಾಕಿದ್ದಾರೆ.ಈ ಕುರಿತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿದ ದುಷ್ಕರ್ಮಿಗಳ ಬಂಧನಕ್ಕೆ ತೀವ್ರ ಶೋಧ ಆರಂಭವಾಗಿದೆ.‌

 

 

error: Content is protected !!

Join the Group

Join WhatsApp Group