ಕಳೆಂಜದಲ್ಲಿ ವಿದ್ಯುತ್ ಅವಘಡ, ಓರ್ವ ಮೃತ್ಯು ಪ್ರಕರಣ ➤ ಮೂವರ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ನ. 28: ಬೆಳ್ತಂಗಡಿಯಲ್ಲಿ ನಡೆದ ವಿದ್ಯುತ್ ಅವಘಡಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಕೇಸ್ ದಾಖಲಾಗಿದೆ. ಕೆಇಬಿ ಇಲಾಖೆಯ ಲೈನ್ ಮ್ಯಾನ್ ಉದಯ, ಉಪ ಗುತ್ತಿಗೆದಾರ ಕುಮಾರ್ ಪೂಜಾರಿ ,ಮುಖ್ಯ ಗುತ್ತಿಗೆದಾರ ಮೂಗರೋಡಿ ಕನ್ಸ್ಟ್ರಕ್ಷನ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬೆಳ್ತಂಗಡಿ ತಾಲೂಕಿನ ಕಳೆಂಜ ಇಲ್ಲಿನ ಶಾಲೆತ್ತಡ್ಕ ಜಂಕ್ಷನ್ ನಲ್ಲಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ನಡೆದಿತ್ತು.ವಿದ್ಯುತ್ ಅವಘಡದಿಂದ ಮೂಡಬಿದಿರೆಯ 20ವರುಷದ ಪ್ರತಾಪ್ ಎಂಬುವರು ಮೃತ ಪಟ್ಟಿದ್ದರು. ಮೂಡಬಿದ್ರೆಯ ಗುತ್ತಿಗೆದಾರರಾದ ಕುಮಾರ್ ಎಲೆಕ್ಟ್ರಿಕಲ್ಸ್ ನ ಸಿಬ್ಬಂದಿಗಳಾದ ಇವರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ವಿದ್ಯುತ್ ಕಂಬದಲ್ಲಿ ಇರುವಾಗಲೇ ವಿದ್ಯುತ್ ಶಾಕ್ ತಗುಲಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಜೊತೆಗಿದ್ದ ನಾಗಪ್ಪ ಮೂಡಬಿದ್ರೆ ಹಾಗೂ ಕಿಶೋರ್ ಮೂಡಬಿದ್ರೆ ಇವರುಗಳಿಗೆ ಗಾಯಗಳಾಗಿತ್ತು.

 

error: Content is protected !!

Join the Group

Join WhatsApp Group