ಪುತ್ತೂರು: ವಾಹನ ಶೋ ರೂಮ್ ಒಳಗೆ ನುಗ್ಗಿ ಮಾಜಿ ನೌಕರನಿಂದ ದಾಂದಲೆ ➤ ಪಿಎಫ್‍ಗಾಗಿ ನಡೆಯಿತು ನೂಕಾಟ- ತಲ್ಲಾಟ

(ನ್ಯೂಸ್ ಕಡಬ) newskadaba.com ಪುತ್ತೂರು ನ. 26: ದ್ವಿಚಕ್ರ ವಾಹನ ಶೋ ರೂಮ್ ಗೆ ಅಕ್ರಮ ಪ್ರವೇಶಿಸಿ ಮಾಜಿ ನೌಕರ ದಾಂಧಲೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

 

 

ಪುತ್ತೂರಿನ ಪ್ರತಿಷ್ಟಿತ ವಾಹನ ಶೋ ರೂಮ್ ವೊಂದಕ್ಕೆ ಮಾಜಿ ನೌಕರರಾದ ರಂಜನ್ (26) ಎಂಬುವರು ಅಕ್ರಮವಾಗಿ ಪ್ರವೇಶಿಸಿ ಅವರ ಪಿಎಫ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಹೆಚ್ ಆರ್ ಗಿರೀಶ್ ಅವರನ್ನು ಅವಾಚ್ಯವಾಗಿ ನಿಂದಿಸಿದಲ್ಲದೆ, ಕ್ಯಾಬೀನ್ನಲ್ಲಿದ್ದ ಕೃಷ್ಣ ಕಿಶೋರ್ ಎಂಬುವರ ಮೇಲೆ ಹಲ್ಲಗೆ ಯತ್ನಿಸಿದ್ದಾನೆ, ಈ ವೇಳೆ ಕೃಷ್ಣ ಕಿಶೋರ್ ಎಂಬುವರ ಪುತ್ರ ಅಖಿಲೇಶ್ ತಡೆಯಲು ಬಂದಿದ್ದಾರೆ.

 

ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ನೂಕಾಟ- ತಲ್ಲಾಟ ನಡೆದಿದ್ದು ಅಖಿಲೇಶ್ ಹಾಗೂ ರಂಜನ್ ಗೆ ಗಾಯಾಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಜನ್ ರವರು ಅಖಿಲೇಶ್ ರವರನ್ನು ತಳ್ಳಿದ ರಭಸಕ್ಕೆ ಅಖಿಲೇಶ್ ರವರ ಬೆನ್ನಿಗೆ ಪಾರ್ಟಿಷಿಯನ್ ಗ್ಲಾಸ್ ಚುಚ್ಚಿದೆ. ಹಾಗೂ ರಂಜನ್ ರವರ ಕೈ ಹಾಗೂ ಕುತ್ತಿಗೆ ಗೆ ಗಾಯಾಗಳಾಗಿದ್ದು ಇದೀಗಾ ಇಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಇನ್ನು ಈ ಘಟನೆಗೆ ಸಂಭಂದಿಸಿದಂತೆ ಇತ್ತಂಡಗಳು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

error: Content is protected !!
Scroll to Top