ಈ ದಿನದ ರಾಶಿಫಲ ತಿಳಿಯೋಣ

ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲು ಪ್ರಯತ್ನಪಡಿ, ಇನ್ನೊಬ್ಬರ ಒತ್ತಾಯದ ಮೇರೆಗೆ ಬಾಳುವುದು ಒಳ್ಳೆಯದಲ್ಲ. ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ. ಹೆಚ್ಚಿನ ಅವಕಾಶಗಳು ನಿಮ್ಮ ಕೆಲಸದಲ್ಲಿ ಕಾಣಬಹುದು. ಮಕ್ಕಳ ಬೆಳವಣಿಗೆಗಾಗಿ ವಿಶೇಷ ಚಟುವಟಿಕೆಗಳನ್ನು ಸಿದ್ಧಪಡಿಸುತ್ತಿರಿ. ಅನಿರೀಕ್ಷಿತ ಪ್ರಯಾಣಗಳು ಈದಿನ ಕಂಡುಬರುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳಿಗೆ ಕುಳಿತುಕೊಂಡು ಪರಿಹಾರವನ್ನು ಹುಡುಕಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕರಗುತ್ತಿರುವ ಹಣಕಾಸಿನ ವ್ಯವಸ್ಥೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕಾದ ಅನಿವಾರ್ಯತೆ ಇದೆ. ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಷಯಗಳಿಂದ ದೂರವಿದ್ದು ಬಿಡಿ. ನಿಮ್ಮ ಆತ್ಮಸ್ಥೈರ್ಯವನ್ನು ಕುಂದಿಸುವ ವ್ಯವಸ್ಥಿತವಾದ ತಂತ್ರ ನಡೆಯಬಹುದು ಎಚ್ಚರವಿರಲಿ. ಆರೋಗ್ಯದ ದೃಷ್ಟಿಕೋನದಿಂದ ಆಹಾರ ಹಾಗೂ ನಿಯಮಿತ ವ್ಯಾಯಾಮವನ್ನು ಮಾಡುವುದು ಒಳಿತು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆರ್ಥಿಕ ವಿಷಯವಾಗಿ ನಿಧಾನಗತಿಯ ಪ್ರಗತಿ ಕಂಡು ಬರಲಿದೆ. ಕೆಲವು ಹೂಡಿಕೆಗಳು ನಿಮ್ಮ ವ್ಯವಸ್ಥೆಗೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕುಟುಂಬಸ್ಥರ ನೆರವಿನಿಂದ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಂದಾಗುವಿರಿ. ಆರ್ಥಿಕ ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಭೋಗ ವಿಲಾಸಿತನ ಪ್ರದರ್ಶನ ಮಾಡುವುದು ಒಳ್ಳೆಯದಲ್ಲ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಇಲ್ಲದಿರುವ ಉಸಾಬರಿಗೆ ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ಕೆಲಸ ಮಾಡುವಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ಇಷ್ಟಾರ್ಥ ಕಾರ್ಯಗಳನ್ನು ಮಾಡಲು ಮುಂದಾಗಿ. ಅನಗತ್ಯ ಅಪಪ್ರಚಾರಗಳು ನಿಮ್ಮ ಮನಸ್ಥಿತಿಯನ್ನು ಹಾಳುಮಾಡಬಹುದು ಆದಷ್ಟು ಋಣಾತ್ಮಕ ಯೋಚನೆ ಬಿಟ್ಟುಬಿಡಿ. ನಿಮ್ಮ ಕೆಲಸಗಳನ್ನು ವಿಶಾಲ ವ್ಯಾಪ್ತಿಯಲ್ಲಿ ವೃದ್ಧಿಸಿಕೊಳ್ಳಲು ಮುಂದಾಗಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆರ್ಥಿಕ ವ್ಯವಹಾರಗಳಲ್ಲಿ ಬೆಳವಣಿಗೆ ಕಂಡುಬರಲಿದೆ. ಹಿತೈಷಿಗಳೊಡನೆ ಹಾಗೂ ನಿಮ್ಮ ಪ್ರಿಯಕರ ಸಂಬಂಧಗಳನ್ನು ಇನ್ನಷ್ಟು ಗಟ್ಟಿಯಾಗಲು ಪ್ರಯತ್ನಿಸಿ. ಕೆಲವರು ಸ್ನೇಹ ಸಂಬಂಧದಲ್ಲಿ ಹುಳಿ ಹಿಂಡುವ ಸಾಧ್ಯತೆ ಉಂಟು. ಯೋಜನೆಯ ಪರಿಶ್ರಮ ಹಾಗೂ ಹೆಚ್ಚು ಓಡಾಡುವಿಕೆ ಶ್ರಮದಾಯಕ ಎನಿಸಿದರೂ ಸಹ ಆತ್ಮಬಲ ವೃದ್ಧಿಸಲಿದೆ. ಸಂಗಾತಿಯೊಡನೆ ಪ್ರೇಮಮಯ ಜೀವನ ನಿಮ್ಮದಾಗುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಅನಿರೀಕ್ಷಿತ ತಿರುವುಗಳು ಈ ದಿನದಲ್ಲಿ ಎದುರಾಗಲಿದೆ. ಯಾಂತ್ರಿಕ ವಸ್ತುಗಳಲ್ಲಿ ಅಗತ್ಯ ಜಾಗ್ರತೆವಹಿಸಿ. ನಿಗದಿತ ಗುರಿಯನ್ನು ತಲುಪುವ ನಿಮ್ಮ ಕಾರ್ಯ ಯಶಸ್ವಿಯಾಗಲಿದೆ. ಉದ್ಯೋಗದಲ್ಲಿ ಗೆಲುವಿನ ಲಯವನ್ನು ಪಡೆಯುತ್ತೀರಿ. ನಿಮ್ಮ ಮೇಲಿನ ತಪ್ಪು ಅಭಿಪ್ರಾಯಗಳು ಪರಿಹಾರವಾಗಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಹಳೆಯ ಹೂಡಿಕೆಗಳು ಲಾಭಾಂಶ ತರುವುದು ನಿಶ್ಚಿತವಾಗಿದೆ. ಕುಟುಂಬದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಕಡಿಮೆಯಾಗಬಹುದು, ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಬೇರೆ ರೀತಿಯಾದ ಅರ್ಥ ಕೊಡಲಾಗುತ್ತದೆ. ಉದ್ಯೋಗ ಮತ್ತು ಕುಟುಂಬವನ್ನು ಸರಿದೂಗಿಸಿ. ಪತ್ನಿಯೊಡನೆ ಆದಷ್ಟು ಪ್ರೇಮದಿಂದ ವರ್ತಿಸಿ ಅವರನ್ನು ನಿಮ್ಮ ಪ್ರೀತಿಯ ಮಾತುಗಳಿಂದ ಅಥವಾ ಉಡುಗೊರೆಯಿಂದ ಸತ್ಕರಿಸಿ, ನಿಮ್ಮ ಬಗ್ಗೆ ಅವರಲ್ಲಿ ಅಗಾಧ ಪ್ರೇಮವಿದೆ ಪ್ರೇಮದ ಸಾಕ್ಷಾತ್ಕಾರವಾಗಲು ಈ ನಿಮ್ಮ ಕಾರ್ಯಗಳು ಉಪಯುಕ್ತವಾಗುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸಂಜೆಯ ವೇಳೆಗೆ ಶುಭ ಸುದ್ದಿಯನ್ನು ಆಲಿಸುತ್ತೀರಿ. ನಿಂದಕ ಜನಗಳಿಂದ ಅಂತರ ಕಾಯ್ದುಕೊಳ್ಳಿ. ಕೆಲವರ ಮೊನಚಾದ ಮಾತುಗಳು ನಿಮಗೆ ಕೋಪವೇಷ ತರಿಸಬಹುದು ಆದಷ್ಟು ತಾಳ್ಮೆಯಿಂದ ಇರುವುದನ್ನು ರೂಢಿಸಿಕೊಳ್ಳಿ. ಸಹವಾಸ ದೋಷವನ್ನು ಆದಷ್ಟು ನಿಯಂತ್ರಣದಲ್ಲಿಡಿ. ನಿಮ್ಮಿಂದ ಲಾಭ ಅಥವಾ ತಮ್ಮ ಕಾರ್ಯದ ಅವಶ್ಯಕತೆಗಾಗಿ ನಯವಾಗಿ ಜನರು ಮಾತನಾಡಬಹುದು ಅವರ ಷಡ್ಯಂತ್ರ ನಿಮ್ಮ ಬುದ್ಧಿಶಕ್ತಿಯಿಂದ ಅರಿತುಕೊಳ್ಳಲು ಮುಂದಾಗಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಆರ್ಥಿಕ ವ್ಯವಹಾರದಲ್ಲಿ ಮಧ್ಯಮಗತಿ ಸ್ಥಾನದಲ್ಲಿದೆ. ಕುಟುಂಬದ ಕೆಲವು ಖರ್ಚುಗಳು ಹೆಚ್ಚಾಗುವ ಸಂಭವ ಇದೆ. ಆದಷ್ಟು ನಿಮ್ಮ ವೃತ್ತಿಯಲ್ಲಿ ಬೆಳವಣಿಗೆ ಪಡೆಯಲು ಮುಂದಾಗಿ. ಮುಂದಿನ ದಿನಗಳ ಉತ್ತಮವಾದ ಸಮಯ ನಿಮಗೆ ಸಂತೋಷ ತರಿಸಲಿದೆ.ಅಂದಿನ ದಿನದ ವ್ಯವಸ್ಥೆಗಾಗಿ ಬದುಕುವುದು ಸರಿಯಲ್ಲ, ಹಾಗೂ ಮನರಂಜನೆ, ಮೋಜು-ಮಸ್ತಿ ಗಳಿಗೆ ಹಣ ಖರ್ಚು ಮಾಡುವುದು ಬೇಡ. ಸಂಗಾತಿಯ ಮಾತುಗಳಿಗೆ ಸಂವೇದನಾಶೀಲರಾಗುವಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡುವುದು ಸೂಕ್ತ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆತುರದ ನಿರ್ಣಯಗಳಿಂದ ಪರಿಸ್ಥಿತಿ ವ್ಯತಿರಿಕ್ತವಾಗಬಹುದು ಎಚ್ಚರ. ಜಂಟಿ ವ್ಯವಹಾರಗಳು ಅನುಮಾನದ ವಾತಾವರಣ ತರಲಿದೆ. ನಿಮ್ಮ ಸಾಹಸಶೀಲ ಗುಣವೂ ತುಂಬಾ ಉತ್ತಮವಾಗಿ ವ್ಯಕ್ತವಾಗುತ್ತದೆ, ಹಾಗೂ ಇದು ಉತ್ಸಾಹಭರಿತ ಗೊಳಿಸುತ್ತದೆ. ಧ್ಯಾನ, ಯೋಗ ಮತ್ತು ಭಗವಂತನ ಆರಾಧನೆಯಿಂದ ನಿಮ್ಮ ಮಾನಸಿಕ ಅಸಮತೋಲನ ದೂರವಾಗುತ್ತದೆ. ಅನುಮಾನಸ್ಪದ ಹಣಕಾಸಿನ ಯೋಜನೆಗಳನ್ನು ಆದಷ್ಟು ತಡೆಗಟ್ಟಿ. ಕೆಲವರು ನಿಮಗೆ ಸಹಾಯ ಮಾಡಲು ಮುಂದೆ ಬರಬಹುದು ಆದರೆ ಅದು ಶಾಶ್ವತ ಅಲ್ಲ ನಿಮ್ಮ ಸ್ವಸಾಮರ್ಥ್ಯವನ್ನು ಅವಲಂಬಿಸುವುದು ಸೂಕ್ತ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಬಂಧುಗಳೊಡನೆ ಇರುವ ವೈಷಮ್ಯವನ್ನು ಆದಷ್ಟು ಪರಿಹರಿಸಲು ಮುಂದಾಗಿ. ನಿಮ್ಮಲ್ಲಿ ಮೂಡುವ ಕೋಪವನ್ನು ತಡೆಗಟ್ಟುವುದು ಸೂಕ್ತ. ಒಂದು ವಿಚಾರಗಳಲ್ಲಿ ತರ್ಕ ಅಥವಾ ವಾದ-ವಿವಾದಗಳು ಹೆಚ್ಚು ಮಾಡುವುದು ಸರಿ ಕಂಡುಬರುವುದಿಲ್ಲ. ನೀವು ಅನುಭವಿಸುತ್ತಿರುವ ಏಕಾಂಗಿತನವನ್ನು ತೆಗೆದುಹಾಕಿ ಸಮಾಜದೊಂದಿಗೆ ಬೆರೆಯಲು ಪ್ರಯತ್ನ ಮಾಡುವುದು ಒಳ್ಳೆಯದು. ನಿಮ್ಮ ಯೋಜನೆಗಳಿಗೆ ಕುಟುಂಬದಿಂದ ಸಹಕಾರ ಪಡೆಯಲು ಸಂಕೋಚ ಬೇಡ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿರುದ್ಯೋಗಿಗಳಿಗೆ ಉತ್ತಮ ರೀತಿಯಾದ ಉದ್ಯೋಗವಕಾಶಗಳು ಸಿಗಲಿದೆ. ನಿಮ್ಮಲ್ಲಿನ ಮನಸ್ಥಿತಿಯನ್ನು ಸಮಾಧಾನ ಪಡಿಸಿ ಕೊಳ್ಳುವುದು ಅತಿಮುಖ್ಯ. ಹೆಚ್ಚಿನ ಕೋಪ ವೇಷ ಒಳ್ಳೆಯದಲ್ಲ. ಮನೆ ಬದಲಾವಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಕಾಣಬಹುದು. ಮಕ್ಕಳ ಬೆಳವಣಿಗೆ ಉತ್ತಮ ರೀತಿಯಾಗಿ ಕಂಡುಬರುತ್ತಿದೆ. ಬಂಧು-ಮಿತ್ರರಿಂದ ನೆರವು ಸಿಗುವ ಸಾಧ್ಯತೆ ಉಂಟು. ವಿನಾಕಾರಣ ಕಾದಾಡುವ ಮನಸ್ಥಿತಿಯನ್ನು ತೆಗೆದುಹಾಕಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!

Join the Group

Join WhatsApp Group