ಕಾಸರಗೋಡು :ಕೊಲೆಯಲ್ಲಿ ಅಂತ್ಯವಾಯ್ತು ಸ್ನೇಹಿತರ ಜಗಳ

(ನ್ಯೂಸ್ ಕಡಬ) newskadaba.com ಕಾಸರಗೋಡು ನ. 16: ಸ್ನೇಹಿತರ ನಡುವೆ ಜಗಳ ನಡೆದ ಪರಿಣಾಮ ಓರ್ವನ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ. ಈ ಘಟನೆ ಕಾಸರಗೋಡುವಿನಲ್ಲಿ ನಡೆದಿದೆ.ತಿರುವನಂತಪುರ ನಿವಾಸಿಯಾ ತಲೆಗೆ ಬಡಿದು ಹತ್ಯೆ ಮಾಡಿದಘಟನೆ ರವಿವಾರ ರಾತ್ರಿ ನಡೆದಿದೆ.

ಕೊಲೆಗೀಡಾದವರನ್ನು ತಿರುವನಂತಪುರದ ವಿಜಯನ್ ಮೇಸ್ತ್ರಿ ( 55) ಎಂದು ಗುರುತಿಸಲಾಗಿದೆ. ನಗರ ಹೊರವಲಯದ ಚೆಂಗಳ ಸಂತೋಷ್ ನಗರದ ಬಾಡಿಗೆ ಮನೆಯಲ್ಲಿ ಕೃತ್ಯ ನಡೆದಿದೆ. ಜೊತೆಗಿದ್ದ ತಮಿಳುನಾಡು ಮೂಲದ ಯುವಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವಿಜಯನ್ ಹಾಗೂ ಸ್ನೇಹಿತನ ನಡುವೆ ಉಂಟಾದ ವಾಗ್ವಾದ ಕೊಲೆಗೆ ಕಾರಣವೆನ್ನಲಾಗಿದೆ.ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಆಪರೇಷನ್ ಆಡಿಯೋದ ಬಗ್ಗೆ ಚಾಟಿ ಬೀಸಿದ ಸ್ಪೀಕರ್ ➤ಸದನದಲ್ಲಿ ಭಾವುಕರಾದ ರಮೇಶ್ ಕುಮಾರ್

Xl

error: Content is protected !!
Scroll to Top