ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ.14: ಕರೋಪಾಡಿ ಗ್ರಾಮದ ಕುರೋಮೂಲೆ ಎಂಬಲ್ಲಿ ವ್ಯಕ್ತಿಯೊಬ್ಬ ಮಾನಸಿಕವಾಗಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕರೋಪಾಡಿ ಗ್ರಾಮದ ಕುರೋಮೂಲೆ ನಿವಾಸಿ ಸತೀಶ್(39) ಎಂದು ಗುರುತಿಸಲಾಗಿದೆ.

 

 

ಸತೀಶ್ ಅವರು ವಿಪರೀತ ಕುಡಿತ ಚಟವನ್ನು ಹೊಂದಿದ್ದು, ಕುಡಿತದ ಚಟ ಹೆಚ್ಚಾಗಿ ಮಾನಸಿಕವಾಗಿ ನೊಂದುಕೊಂಡಿದ್ದರು. ಇದೇ ಕಾರಣದಿಂದಾಗಿ ಈ ಹಿಂದೆ ಮೂರು ಬಾರಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಸತೀಶ್ ಅವರ ಪತ್ನಿ ಕೂಲಿ ಕೆಲಸಕ್ಕೆ ತೆರಳಿದ್ದು,ಮೃತರ ತಂದೆ ಹೊರಗಡೆ ಹೋಗಿದ್ದು, ಮರಳಿ ಮನೆಗೆ ಬಂದಾಗ ಸತೀಶ್ ರವರು ಗೇರು ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ .ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Xl

error: Content is protected !!
Scroll to Top