ಪುತ್ತೂರು: ಸೋಲಾರ್ ದೀಪ ನೀಡಿ ಮಾತು ಉಳಿಸಿಕೊಂಡ ಶಾಸಕ ಸಂಜೀವ ಮಠಂದೂರು

(ನ್ಯೂಸ್ ಕಡಬ) newskadaba.com ಪುತ್ತೂರು, .11: ಶಾಸಕ ಸಂಜೀವ ಮಠಂದೂರು ಅವರು ಮಾಣಿಲ ದಂಡೆಪ್ಪಾಡಿ ಕಿಟ್ಟ ಮೂಲ್ಯ ಅವರ ಮನೆಯಲ್ಲಿ ಬೆಳಕು ಕಾಣದ ಮನೆಯೊಂದಕ್ಕೆ ಬೆಳಕು ನೀಡುವ ಭರವಸೆ  ನೀಡಿದಂತೆ ಸೋಲಾರ್ ದೀಪವವನ್ನು ಉದ್ಘಾಟಿಸಿದರು.

 

 

ತಿಂಗಳ ಹಿಂದೆ ಮನೆಗೆ ಭೇಟಿ ನೀಡಿದ ಅವರು ಸೋಲಾರ್ ದೀಪ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಾಸಕರು ಸೋಲಾರ್ ದೀಪ ಅಳವಡಿಸಿ ತನ್ನ ಭರವಸೆ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು, ಪೆರುವಾಯಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೀತಾನಂದ ಶೆಟ್ಟಿ, ಪುನಚ ಮಹಾಶಕ್ತಿ ಕೇಂದ್ರದ ಸಂಚಾಲಕ ಹರಿಪ್ರಸಾದ್ ಯಾದವ್, ಮತ್ತು ಮತ್ತೀತರರು ಉಪಸ್ಥಿತರಿದ್ದರು.

Also Read  ಪತ್ನಿಯೊಂದಿಗಿನ ಖಾಸಗಿ ಕ್ಷಣದ ವೀಡಿಯೋ ಶೇರ್ ಮಾಡಿದ ಗ್ರಾ.ಪಂ. ಸದಸ್ಯೆಯ ಪತಿ ➤ ವೀಡಿಯೋ ಸಖತ್ ವೈರಲ್

 

error: Content is protected !!
Scroll to Top