ಯು.ಪಿ: ಸಿಎಎ ಪ್ರತಿಭಟನಾಕಾರರ ಮಾಹಿತಿ ನೀಡಿದವರಿಗೆ ನಗದು ಬಹುಮಾನ

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ನ. 07. ಸಿಎಎ ಹಾಗೂ ಎನ್.ಆರ್.ಸಿ ನೋಂದಣಿಯ ವಿರುದ್ಧ ನಡೆದ ಉಗ್ರ ಪ್ರತಿಭಟನೆಯ ನಂತರ ತಲೆಮರೆಸಿಕೊಂಡಿರುವ 14 ಪ್ರತಿಭಟನಾಕಾರರ ಕುರಿತು ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಯು.ಪಿ ಸರ್ಕಾರ ಘೋಷಣೆ ಮಾಡಿದೆ.

ಕಳೆದ ಡಿಸೆಂಬರ್‌ನಲ್ಲಿ ಲಖನೌ ನಲ್ಲಿ ನಡೆದ ಸಿಎಎ ಹಾಗೂ ಎನ್.ಆರ್.ಸಿ ವಿರುದ್ಧ ನಡೆದ ಪ್ರತಿಭಟನೆಯು ಹಿಂಸಾತ್ಮಕ ರೂಪವನ್ನು ತಾಳಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರು ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿಗಳ ಸಹಿತ  40 ಜನರನ್ನು ಬಂಧಿಸಲಾಗಿತ್ತು.

error: Content is protected !!
Scroll to Top