ಮಂಡೆಕೋಲು : ಪುಟಾಣಿಗಳಿಗೆ ಒಲಿದ “ಸಿರಿಗನ್ನಡ ಕಂದ ಪ್ರಶಸ್ತಿ”

(ನ್ಯೂಸ್ ಕಡಬ) newskadaba.com ಮಂಡೆಕೋಲು . 07: ಸೆಪ್ಟಂಬರ್, ಅಕ್ಟೋಬರ್ 2020ರ ಅವಧಿಯಲ್ಲಿ ಪ್ರಸಾರವಾದ ಹಾಡು ಮಾತಾಡು ಕಾರ್ಯಕ್ರಮ ಸರಣಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿದ್ದ ಒಂದೇ ಮನೆಯ ಇಬ್ಬರು ಅಂಗನವಾಡಿ ಪುಟಾಣಿಗಳ ಮುಡಿಗೆ ಇದೀಗಾ ಸಿರಿಗನ್ನಡ ಕಂದ ಪ್ರಶಸ್ತಿ ಒಲಿದಿದೆ.

ಇವರು ದೇವರಗುಂಡ ಮೂಲದ ಹರೀಶ್ ಡಿ. ಆರ್ ರವರ ಮಗಳಾದ ತನ್ವಿ ಡಿ ಹಾಗೂ ನವೀನ್ ಡಿ ಆರ್ ರವರ ಮಗನಾದ ಆಶಿತ್ ಡಿ ಎನ್ ರವರಿಗೆ ಸಿರಿಗನ್ನಡ ಕಂದ ಪ್ರಶಸ್ತಿ ನೀಡಲಾಗಿದೆ. ಮಂಡೆಕೋಲು ಗ್ರಾಮದ ದೇವರಗುಂಡ ಅಂಗನವಾಡಿಯ ಈ ಪುಟಾಣಿ ಮಕ್ಕಳ ಸಾಧನೆಗೆ ಕಾರ್ಯಕರ್ತೆ ಪ್ರಿಯಲತಾ ಮಾರ್ಗದರ್ಶನ ಹಾಗೂ ಪೋತ್ಸಾಹ ನೀಡಿದ್ದಾರೆ.

 

 

error: Content is protected !!

Join the Group

Join WhatsApp Group