ಬ್ಯಾಟ್ ಹಿಡಿಯುವ ಕೈಯಲ್ಲಿ ಪೊರಕೆ.!! ► ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ ಈತ ಯಾರು ಅಂತಿರಾ.??

(ನ್ಯೂಸ್ ಕಡಬ) newskadaba.com ಮುಂಬೈ,ಸೆ.27. ‘ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಕೈಜೋಡಿಸಿದ ಸಚಿನ್ ತೆಂಡೂಲ್ಕರ್ ಹಾಗು ಪುತ್ರ ಅರ್ಜುನ್‌ ಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸಿದರು.

ನಗರವನ್ನು ಸುಂದರ ಮತ್ತು ಆರೋಗ್ಯವಂತವಾಗಿರಿಸಲು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಖ್ಯಾತಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಜನರನ್ನು ಒತ್ತಾಯಿಸಿದರು.

ಬಾಂದ್ರಾದಲ್ಲಿ ಮಂಗಳವಾರ ಮುಂಜಾನೆ ತಮ್ಮ ಪುತ್ರ ಅರ್ಜುನ್‌ರೊಂದಿಗೆ ಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸಿದ ಸಚಿನ್, ಸ್ವಚ್ಛತೆಯ ಸಂದೇಶವನ್ನು ಸಾರುವ ಮೂಲಕ ಕೇಂದ್ರದ ‘ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಕೈಜೋಡಿಸಿದರು.

error: Content is protected !!
Scroll to Top