ಕೆರೆಗುರುಳಿದ ಸ್ವಿಫ್ಟ್ ಡಿಸೈರ್ ► ಐವರು ನೀರುಪಾಲು

(ನ್ಯೂಸ್ ಕಡಬ) newskadaba.com  ಹಾಸನ,ಸೆ.27. ಸ್ವಿಫ್ಟ್ ಡಿಸೈರ್ ಕಾರೊಂದು ಕೆರೆಗೆ ಉರುಳಿದ ಪರಿಣಾಮ ಐವರು ನೀರುಪಾಲಾದ ಘಟನೆ ಹಾಸನದ ಹನುಮನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹಾಸನ ತಾಲೂಕಿನ ಹನುಮನಹಳ್ಳಿ ಬಳಿ ಈ ಘಟನೆ ನಡೆದಿದೆ. ಹಂಗ್ರಳ್ಳಿ ಗ್ರಾಮದಿಂದ ಗೊರೂರು ಮಾರ್ಗದಲ್ಲಿರುವ ಹನುಮನಹಳ್ಳಿ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ವ್ಯಕ್ತಿಯ ಶವ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಕಾರು ಕೆರೆಗೆ ಉರುಳಿರುವುದು ಬೆಳಕಿಗೆ ಬಂದಿತ್ತು. ನೀರಿನಲ್ಲಿ ತೇಲುತ್ತಿದ್ದ ಓರ್ವ ವ್ಯಕ್ತಿಯ ಶವವನ್ನು ಮೇಲೆತ್ತುವಾಗ ಕಾರು ನೀರೊಳಗೆ ಇರುವುದು ಗಮನಕ್ಕೆ ಬಂದಿದೆ. ಆ ಕಾರಿನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿರುವುದು ಗೊತ್ತಾಗಿದೆ.

ಘಟನೆಯಲ್ಲಿ ಇಬ್ಬರ ಗುರುತು ಪತ್ತೆಯಾಗಿದ್ದು. ಹೊಳೆನರಸೀಪುರ ತಟ್ಟೆಕೆರೆಯ ಅನಿಲ್(22) ಹಾಗೂ ಶಿವಮೊಗ್ಗ ಮೂಲದ ಉಮೇಶ್ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾರ್ ಮೇಲೆತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ.

error: Content is protected !!

Join the Group

Join WhatsApp Group