ವಿವಿಧ ಕಡೆ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ► ಆಲಂಕಾರು ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಆಶ್ಲೇಷ್ ಬಾಕಿಲ

(ನ್ಯೂಸ್ ಕಡಬ) newskadaba.com ಕಡಬ,ಸೆ.25, ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಲವು ಕಡೆಗಳಲ್ಲಿ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಆಲಂಕಾರು ಹಿರಿಯ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ ವಿದ್ಯಾರ್ಥಿ ಆಶ್ಲೇಷ್ ಬಾಕಿಲ ಭಾಗವಹಿಸಿ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ.

ಪುತ್ತೂರು ಕಲ್ಲೇಗ ಶಿವಾಜಿ ಯುವಕ ಮಂಡಲ ಆಯೋಜಿಸಿದ್ದ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ, ಶ್ರೀದೇವಿ ತುಳುನಾಡ ಬಳಗ ನಗ್ರಿ ಶರವೂರು ಸಂಘಟಿಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ, ಆಲಂಕಾರು ಹಿಂದೂ ಜಾಗರಣ ವೇದಿಕೆ ನಡೆಸಿದ ಕೃಷ್ಣ ಸ್ಫರ್ಧೆಯಲ್ಲಿ ಪ್ರಥಮ, ಹಿಂದೂ ಜಾಗರಣ ವೇದಿಕೆ ಮತ್ತು ಮೊಸರು ಕುಡಿಕೆ ಸಮಿತಿ ಪುತ್ತೂರು ಆಯೋಜಿಸಿದ್ದ ಕೃಷ್ಣ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡ ಈತ ಆಲಂಕಾರು ಕ್ಲಸ್ಟರ್ನ ಸಿ.ಆರ್.ಪಿ ಪ್ರದೀಪ್ ಬಾಕಿಲ ಮತ್ತು ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಹೇಮಲತಾ ದಂಪತಿಗಳ ಸುಪುತ್ರನಾಗಿದ್ದಾನೆ.

error: Content is protected !!
Scroll to Top