ಸುಬ್ರಹ್ಮಣ್ಯ: ವಿದ್ಯುತ್‌ ತಂತಿ ತಾಗಿ ಮೃತಪಟ್ಟ ರಾಷ್ಟ್ರ ಪಕ್ಷಿ ನವಿಲು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.12: ಕುಕ್ಕೆ ಸುಬ್ರಹ್ಮಣ್ಯದ ಕೆ ಎಸ್‌ ಎಸ್‌ ಕಾಲೇಜಿನ ಪ್ರಯಾಣಿಕರ ಬಸ್‌ ತಂಗುದಾನದ ಬಳಿ ನವಿಲೊಂದು ತನ್ನ ರೆಕ್ಕೆ ಬಿಚ್ಚಿ ಹಾರುವ ಸಂದರ್ಭದಲ್ಲಿ ವಿದ್ಯುತ್‌ ತಂತಿಗೆ ಅದರ ರೆಕ್ಕೆ ತಾಗಿ ಸಾವಿಗೀಡಾದ ಘಟನೆ ಕಳೆದ ದಿನ ನಡೆದಿದೆ.

 

 

ನವಿಲು ಮರದಿಂದ ಬೇರೆಕಡೆಗೆ ಹಾರುವ ಸಂದರ್ಭದಲ್ಲಿ ನವಿಲಿನ ರೆಕ್ಕೆಗೆ ವಿದ್ಯುತ್‌ ತಂತಿ ತಾಗಿ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲಾಖೆಯ ಮಾರ್ಗಸೂಚಿಯಂತೆ ನವಿಲಿನ ಮುಂದಿನ ಹಂತದ ಕಾರ್ಯಗಳನ್ನು ನಡೆಸಲಾಗುವುದು ಎಂದು ರೇಂಜರ್‌ ರಾಘವೇಂದ್ರ ರವರು ತಿಳಿಸಿದ್ದಾರೆ.

Also Read  ಫ್ರೆಂಚ್ ಓಪನ್ ಟೆನಿಸ್ ಗೆ ಮಳೆಯಿಂದ ಅಡಚಣೆ

 

error: Content is protected !!
Scroll to Top