ಪುತ್ತೂರು : ಸ್ಕೂಟರ್‌ ಸ್ಕಿಡ್‌ ➤ ಸವಾರ ಸ್ಥಳದಲ್ಲೆ ಮೃತ್ಯು

(ನ್ಯೂಸ್ ಕಡಬ) newskadaba.com ಬನ್ನೂರು, ಅ.09: ನೆಕ್ಕಿಲ ನಿವಾಸಿ ಯುವಕರೊಬ್ಬರು ಬನ್ನೂರು ಶಾಲಾ ಬಳಿ ಸ್ಕೂಟರ್‌ವೊಂದು ಸ್ಕಿಡ್‌ ಆಗಿ ಸವಾರ ಮೃತಪಟ್ಟ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಮೃತರನ್ನು ಬನ್ನೂರು ನೆಕ್ಕಿಲ ನಿವಾಸಿ ಬೂಂದ್‌ ಕುಡಿಯುವ ನೀರಿನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಿಶಾಂತ್(28‌ ವ.) ಎಂದು ಗುರುತಿಸಲಾಗಿದೆ.

ಇವರು ರಾತ್ರಿ ವೇಳೆ ಟಿವಿಎಸ್‌ ಸ್ಕೂಟರ್‌ ನಲ್ಲಿ ಮನೆ ಕಡೆ ಬರುತ್ತಿದ್ದ ವೇಳೆ ಸ್ಕೂಟರ್‌ ಸ್ಕಿಡ್‌ ಆಗಿರಬಹುದು ಎಂದು ಹೇಳಲಾಗುತ್ತದೆ. ಅದೇ ದಾರಿಯಾಗಿ ತಡ ರಾತ್ರಿ ವ್ಯಕ್ತಿಯೊಬ್ಬರು ಮನೆಗೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಸ್ಕೂಟರ್‌ ಬಿದ್ದಿದ್ದು, ಸ್ಕೂಟರ್‌ ಸವಾರ ಪಕ್ಕದ ಚರಂಡಿಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿತ್ತು. ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ರಾತ್ರಿಯೇ ಭೆಟಿ ನೀಡಿ ಮಅಹಿತಿ ಪಡೆದುಕೊಂಡಿದ್ದಾರೆ. ಮೃತರು ತಾಯಿ ಚಂದ್ರಾವತಿ ಅವರನ್ನು ಅಗಲಿದ್ದಾರೆ.

Also Read  ರ‍್ಯಾಪರ್ ಚಂದನ್ ಶೆಟ್ಟಿಗೆ ಸಂಕಷ್ಟ ತಂದ 'ಕೋಲು ಮಂಡೆ ಜಂಗಮ ದೇವರು" ಹಾಡು

error: Content is protected !!
Scroll to Top