ಕುಟುಂಬದಲ್ಲಿ ಒಬ್ಬರೇ ಇದ್ದು, ಕೊರೋನಾ ಬಂತೆಂದರೆ ಸಾಕು ಸರ್ಕಾರದಿಂದ ಉಚಿತ ಆಹಾರಧಾನ್ಯ ವಿತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.08: ಮನೆಯಲ್ಲಿ ದುಡಿಯುವರು ಒಬ್ಬರೇ ಆಗಿದ್ದು, ಅವರಿಗೂ ಕೊರೊನಾ ಬಂದಿದ್ದರೆ, ಆ ಕುಟುಂಬಕ್ಕೆ ಸರ್ಕಾರದಿಂದಲೇ ಉಚಿತವಾಗಿ ಆಹಾರಧಾನ್ಯ ವಿತರಿಸಲುವ ಯೋಜನೆಯನ್ನು ರೂಪಿಸಲಾಗಿದೆ. ಒಂದು ವೇಳೆ ಮನೆಯಲ್ಲಿ ಏಕೈಕ ದುಡಿಮೆದಾರರಿಗೆ ಕೊರೊನಾ ಬಂದರೇ ಆ ಕುಟುಂಬದ ಮುಂದಿನ ಗತಿ ಏನು ಎಂಬುದಾಗಿ ಸಭೆಯಲ್ಲಿ ಚರ್ಚಿಸಲಾಯಿತು.

 

 

ಇದಕ್ಕೆ ಒಪ್ಪಿಗೆ ದೊರೆತಿದ್ದು, ಮುಖ್ಯಮಂತ್ರಿಗಳ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ. ಸೋಂಕು ಹರಡದಂತೆ ತಡೆಗೆ ಹಾಗು ಬಡ ಕುಟುಂಬದಲ್ಲಿ ಆತ್ಮಸ್ಥರ್ಯ ಮೂಡಿಸುವಲ್ಲಿ ಈ ಕ್ರಮ ಅಗತ್ಯವಾಗಿದೆ ಎಂದು ವಸತಿ ಸಚಿವ ಸೋಮಣ್ಣ ತಿಳಿಸಿದರು. ಪಾಲಿಕೆ ಆಯುಕ್ತರಾದ ಎನ್. ಮಂಜುನಾಥ್ ಪ್ರಸಾದ್ ಜೊತೆಗೆ ಸಂಸದ ಪಿ. ಸಿ. ಮೋಹನ್, ಸಚಿವ ವಿ. ಸೋಮಣ್ಣ, ಶಾಸಕ ಎನ್ ಎ ಹ್ಯಾರಿಸ್ ಮತ್ತು ಕೆಜೆ ಜಾರ್ಜ್ ನಡೆಸಿದ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕಾರ್ಮಿಕ ಇಲಾಖೆ ಅಥವಾ ಜಿಲ್ಲಾ ಆಡಳಿತದಿಂದ ಕಿಟ್ ಗಳನ್ನು ಪೂರೈಸಲಾಗುವುದು ಎಂದು ಹೇಳಿದ್ದಾರೆ.

 

Also Read  ಡಿ.24 ರಂದು ಕಡಬ ಸಿ.ಎ. ಬ್ಯಾಂಕ್ ನೂತನ ಕಟ್ಟಡ ಉದ್ಘಾಟನೆ ► 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ 'ಯೋಗಕ್ಷೇಮ' ಸಹಕಾರ ಸೌಧ

 

error: Content is protected !!
Scroll to Top