ಪುರುಷರಕಟ್ಟೆ: ರಿಕ್ಷಾ ಚಾಲಕ ಪ್ರವೀಣ್‌ ಶೈಣೈ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.08: ಅವಿವಾಹಿತ 28 ವರ್ಷದ ಯುವಕ ಪ್ರವೀಣ್‌ ಶೈಣೈ ರವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದು, ಇವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ದಿನ ರಾತ್ರಿ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.

 

 

ರಿಕ್ಷಾ ಚಾಲಕರಾಗಿರುವ ಪ್ರವೀಣ್‌ ಶೈಣೈ ಕಳೆದ ರಾತ್ರಿ ಟಿವಿ ನೋಡುತ್ತಿದ್ದು, ಮನೆಯವರು 11 ಗಂಟೆಗೆ ಮಲಗಿರುವ ವೇಳೆ ಮನೆಯ ಹಿಂಬದಿಯ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರವೀಣ್‌ ಶೈಣೈ ಯವರ ತಾಯಿ ರಾತ್ರಿ 2 ಗಂಟೆಗೆ ಎಚ್ಚರಗೊಂಡು ನೋಡಿದ್ದಾಗ ನಾಪತ್ತೆಯಾಗಿದ್ದ. ಬಳಿಕ ಹುಡುಕಾಡಿದಾಗ ಮನೆಯ ಹಿಂಬದಿಯ ಮರವೊಂದರಲ್ಲಿ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮೃತರು ತಂದೆ ಸಂಜೀವ ಶೆಣೈ, ತಾಯಿ ಗೀತಾ ಶೆಣಯ, ಸಹೋದರರನ್ನು ಅಗಲಿದ್ದಾರೆ

Also Read  ಮಂಗಳೂರು ಸ್ಫೋಟಕ ಪ್ರಕರಣ: ಆರೋಪಿ ಆದಿತ್ಯ ರಾವ್ ವಿರುದ್ಧ ಮತ್ತೊಂದು ದೂರು ದಾಖಲು

 

 

error: Content is protected !!
Scroll to Top