ಆತೂರು: ಸಮಸ್ತ ಕೇರಳ ಸುನ್ನೀ ಬಾಲವೇದಿ ನೂತನ ಅಧ್ಯಕ್ಷರಾಗಿ ಮಿಕ್ದಾದ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಆತೂರು ತದ್ಬೀರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆ ಸಮಸ್ತ ಕೇರಳ ಸುನ್ನೀ ಬಾಲವೇದಿ (ಎಸ್ಕೆಎಸ್ಬಿವಿ.) ನೂತನ ಅಧ್ಯಕ್ಷರಾಗಿ ಮಿಕ್ದಾದ್, ಪ್ರಧಾನ ಕಾರ್ಯದರ್ಶಿಯಾಗಿ ಬಾಸಿತ್ ಆಯ್ಕೆಯಾಗಿದ್ದಾರೆ.

ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಜುನೈದ್ ಜಿಫ್ರಿ ತಂಙಳ್ ಅಧ್ಯಕ್ಷತೆಯಲ್ಲಿ ಹಾರಿಸ್ ಮುಸ್ಲಿಯಾರ್, ರಝಾಕ್ ಮುಸ್ಲಿಯಾರ್, ಹಂಝ  ಸಖಾಫಿ, ಮೂಸಾ ಮುಸ್ಲಿಯಾರ್ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.  ಉಪಾಧ್ಯಕ್ಷರಾಗಿ ಮಸೂದ್ , ಜೊತೆಕಾರ್ಯದರ್ಶಿಯಾಗಿ ಆಶಿಕ್ , ಕೋಶಾಧಿಕಾರಿ ಮುಈನುದ್ದೀನ್ ಸಅದ್ ಸಲ್ಮಿ, ಸದಸ್ಯರಾಗಿ ನಿಯಾಝ್, ಇರ್ಷಾದ್,  ರಿಯಾಝ್, ಸಈದ್, ಆಶಿಕ್, ರಾಝಿಕ್, ಸಾದತ್, ಆಶಿಫ್, ಇರ್ಫಾನ್, ಅಫ್ಸಲ್, ಸವಾದ್, ಮಜ್ಲಿಸುನ್ನೂರು ಕಾರ್ಯಕ್ರಮ ನಾಯಕನಾಗಿ ಅಫ್ವಾನ್, ರಹೀಂ  ಇವರುಗಳನ್ನು ಆಯ್ಕೆ ಮಾಡಲಾಯಿತು.

error: Content is protected !!
Scroll to Top