ಕುಂದಾಪುರ: ಸರಣಿ ಕಳ್ಳತನ ➤ ಆರೋಪಿಗಳಿಬ್ಬರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಅ.05: ಕುಂದಾಪುರದ ಆಸು – ಪಾಸಿನ ಪ್ರದೇಶದಲ್ಲಿ ನಡೆದ ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

ಆರೋಪಿಗಳನ್ನು ಹೊನ್ನಾವರದ ಮಂಕಿ ಗ್ರಾಮದ ವಿಲ್ಸನ್ ಪಿಯದಾಸ್ ಲೋಪಿಸ್ (29) ಹಾಗೂ ತೊಕೆಟ್ಟೆಯ 2 ನೇ ಕ್ರಾಸ್ ನಿವಾಸಿ ಗಂಗಾಧರ್ (40) ಎಂದು ಗುರುತಿಸಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಬಂಧಿತರಿಂದ 64.76 ಗ್ರಾಂ ಚಿನ್ನ ಮತ್ತು 112 ಗ್ರಾಂ ಬೆಳ್ಳಿ ಮತ್ತು ಇಸ್ತ್ರಿ ಪೆಟ್ಟಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ರೀತಿಯಾಗಿ ಒಂದು ವರ್ಷದ ಹಿಂದೆ ಮೂರು ಕಳ್ಳತನ ಘಟನೆಗಳು ನಡೆದಿವೆ.

Also Read  ಪ್ರವಾದಿ (ಸ.ಅ) ನಿಂದನೆಗೆ ಖಂಡನೆ- ಶೀಘ್ರ ಶಿಕ್ಷೆಯಾಗಲಿ ➤ SYS ದಕ ಈಸ್ಟ್ ಜಿಲ್ಲಾ ಸಮಿತಿ ಆಗ್ರಹ

 

 

ವಿಲ್ಸನ್ ಬಸ್ರೂರು ಮತ್ತು ಕಟ್ಕೆರಿಯಲ್ಲಿ ಬಾಡಿಗೆ ಮನೆಯಲ್ಲಿದ್ದು ಚಿನ್ನವನ್ನು ಕಳವು ಮಾಡಿ ಗಂಗಾಧರನಿಗೆ ಕೊಡುತ್ತಿದ್ದನು. ಗಂಗಾಧರ ಕುಂದಾಪುರದ ಸಹಕಾರಿ ಸಂಘದಲ್ಲಿ ಈ ಚಿನ್ನವನ್ನು ಅಡವು ಇಡುತ್ತಿದ್ದು, ಇನ್ನು ವಿಲ್ಸನ್‌ನನ್ನು ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಭಟ್ಕಳ ಮತ್ತು ಮಂಕಿ ಪೊಲೀಸ್ ಠಾಣೆಯಲ್ಲಿ ಇದೀಗ ಆತನ ವಿರುದ್ಧ ಪ್ರಕರಣಗಳು ದಾಖಲಾಗಿದೆ.

 

error: Content is protected !!