80 ಜನರಿಗೆ ವಾಟ್ಸಪ್ ಸಂದೇಶ ಕಳುಹಿಸಿ ►18ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿಯ ಆತ್ಮಹತ್ಯೆ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.21.18ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಐಟಿಪಿಎಲ್ ಸಮೀಪದ ಪ್ರೆಸ್ಟೀಜ್ ಶಾಂತಿನಿಕೇತನ್‍ನಲ್ಲಿ ಗುರುವಾರ ನಡೆದಿದೆ.

ಪೋಲ್ಲಾಸ್ ಚೌದರಿ(19) ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಪ್ರವೀಣ್ ಚೌದರಿ ಎಂಬುವವರ ಪುತ್ರನಾಗಿದ್ದು, ಬೆಂಗಳೂರು ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದ. ಪೋಲ್ಲಾಸ್ ಚೌದರಿ ತನ್ನ ತಂದೆ ಜೊತೆ ವೈಟ್‍ಫೀಲ್ಡ್ ಫೊರಂ ಬಳಿ ಇರುವ ಆದರ್ಶ ಪಾಮ್‍ಮೇಡ್ಸ್ ಖಾಸಗಿ ವಿಲ್ಲಾದಲ್ಲಿ ವಾಸವಿದ್ದ.

ಬುಧವಾರ ರಾತ್ರಿ ಪೋಲ್ಲಾಸ್ ಚೌದರಿ ತನ್ನ ಖಾಸಗಿ ವಿಲ್ಲಾದಿಂದ ಶಾಂತಿನಿಕೇತನ್ ಅಪಾಟ್ರ್ಮೆಂಟ್‍ನಲ್ಲಿ ಇರುವ ತನ್ನ ಸ್ನೇಹಿತೆಗೆ ಫೋನ್ ಮಾಡಿ ಅಪಾರ್ಟ್‍ಮೆಂಟ್ ಒಳಗೆ ಬಿಡುವಂತೆ ಸೆಕ್ಯುರಿಟಿಗೆ ಹೇಳು ಎಂದು ಹೇಳಿದ್ದಾನೆ. ಸೆಕ್ಯುರಿಟಿ ಗಾರ್ಡ್ ಬಳಿ ಎಂಟ್ರಿ ಮಾಡಿದ ಪೋಲ್ಲಾಸ್ ನೇರವಾಗಿ 18ನೇ ಮಹಡಿಗೆ ಹೋಗಿ ತನ್ನೆಲ್ಲಾ ಸ್ನೇಹಿತರಿಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ ಬಳಿಕ ಬೆಳಗಿನ ಜಾವ ಸುಮಾರು 6ಗಂಟೆಗೆ ಟೆರೇಸ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Also Read  ಅರಂತೋಡು: ನೆಹರು ಸ್ಮಾರಕ ಪ.ಪೂ ಕಾಲೇಜು ಅರಂತೋಡು ಮತ್ತು ಕೆ ಎಸ್ ಗೌಡ ಪ.ಪೂ ಕಾಲೇಜು ನಿಂತಿಕಲ್ಲು ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ

ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ಕುಟುಂಬ ವರ್ಗದವರು ಹಾಗೂ ಸ್ನೇಹಿತರನ್ನು ವಿಚಾರಣೆ ಮಾಡುತ್ತಿದ್ದಾರೆ.

error: Content is protected !!
Scroll to Top