ಬಂಟ್ವಾಳ: ದೇವಿಪ್ರಸಾದ್‌ ಚಿಕ್ಮುಳಿ ಅವರಿಗೆ ಜೆಸಿಐ ಸಾಧನಾಶ್ರೀ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.12: ಜೆಸಿಐ ಪಂಜ ಪಂಚ ಶ್ರೀಯ ಕಾರ್ಯದರ್ಶಿ ಜೇಸಿ ದೇವಿಪ್ರಸಾದ್‌ ಚಿಕ್ಮುಳಿ ಅವರಿಗೆ ಭಾರತೀಯ ಜೇಸಿಸ್‌ ಆಶ್ರಯದಲ್ಲಿ ಭಾನುವಾರ ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಅದ್ವಿತೀಯ ಸಮ್ಮೇಳನದಲ್ಲಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

 

 

ಈ ಸಂದರ್ಭದಲ್ಲಿ ಜೆಸಿಐ ವಲಯ ಅಧ್ಯಕ್ಷ ಜೆಎಫ್‌ಪಿ ಕಾರ್ತಿಕೇಯ ಮಧ್ಯಸ್ಥ ನಿಕಟಪೂರ್ವ ಅಧ್ಯಕ್ಷರಾದ ಪಿಪಿಪಿ ಅಶೋಕ್‌ ಚುಂತಾರ್‌ ವಲಯ ಉಪಾಧ್ಯಕ್ಷ ಜೆಎಫ್‌ಪಿ ಪ್ರದೀಪ್‌ ಬಾಕಿಲ ವ್ಯವಹಾರ ವಿಭಾಗದ ನಿರ್ದೇಶಕ ಜೇಸಿ ರಾಜೇಶ್‌ ಪುಂಜಲಕಟ್ಟೆ, ಜೆಸಿಐ ಪಂಜ ಪಂಚಶ್ರೀಯ ಸ್ತಾಪಕ ಅಧ್ಯಕ್ಷ ದೇವಿಪ್ರಸಾದ್‌ ಜಾಕೆ, ಘಟಕದ ಅಧ್ಯಕ್ಷ ನಾಗ್‌ ಮಣಿ ಕೆದಿಲ ನಿಕಟಪೂರ್ವ ಅಧ್ಯಕ್ಷ ವಾಸುದೇವ ಮೆಲ್ಪಾಡಿ, ಉಪಾಧ್ಯಕ್ಷ ಜೆಸಿ ಗಣೇಶ್‌ ಪ್ರಸಾದ್‌ ಭೀಮಗುಳಿ, ಪೂರ್ವ ಅಧ್ಯಕ್ಷರುಗಳಾದ ಜೇಸಿ ಶಶಿಧರ ಪಳಂಗಾಯ ಜೇಸಿ ಸಂತೋಷ್‌ ಜಾಕೆ ಜೇಸಿ ಚಂದ್ರಶೇಖರ ಕುಕ್ಕು ಪುಣಿ ಜೇಸಿ ಪುರುಷೋತ್ತಮ ದಂಬೆಕೋಡಿ ಜೇಸಿ ಚೇತನ್‌ ತಂಟೆಪ್ಪಾಡಿ ಜೇಸಿ ಗುರುಪ್ರಸಾದ್‌ ತೋಟ ಜೇಸಿ ತೀರ್ಥ ನಂದ ಕೊಡೆಂಕಿರಿ, ಜೇಸಿ ಸದಸ್ಯರುಗಳಾದ ಜೇಸಿ ಪ್ರವೀಣ್‌ ಕಾಯರ ಜೇಸಿ ದುರ್ಗಾದಾಸ್‌ ಕಡ್ಲಾರ್‌ ಜೇಸಿ ಸುಬ್ರಹ್ಮಣ್ಯ ಕಕ್ಯನ ಜೇಸಿ ಕೌಶಿಕ್‌ ಕುಳ ಉಪಸ್ಥಿತರಿದ್ದರು.

Also Read  ಅಡ್ಯಾರ್:‌ ಕಾರಿಗೆ ಢಿಕ್ಕಿ ಹೊಡೆದು ಕಾರಿನ ಮೇಲೆಯೇ ಮಗುಚಿ ಬಿದ್ದ ಖಾಸಗಿ ಬಸ್ ► ಹಲವರು ಗಂಭೀರ

 

 

 

error: Content is protected !!
Scroll to Top