ಪಂಜ: ದೇವಿಪ್ರಾಸಾದ್‌ ಚಿಕ್ಮುಳಿಯರಿಗೆ ಸಾಧನಾಶ್ರೀ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಪಂಜ, ಸೆ. 04: ಜೇಸಿಐ ಪಂಜ ಪಂಚಶ್ರೀಯ ಕಾರ್ಯದರ್ಶಿ, ಯುವ ಉದ್ಯಮಿ, ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್‌ ನ ಮಾಲಕ ಜೇಸೀ ಜೆಎಫ್‌ಎಂ ದೇವಿಪ್ರಾಸಾದ್‌ ಚಿಕ್ಮುಳಿವಯರಿಗೆ ಜೇಸಿಐ ಭಾರತದ ವಲಯ 15ರ ವಿಭಾಗದ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸೀ ಘಟಕದ ಓರ್ವ ಸದಸ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪಂಜ ಜೇಸಿಐ ಘಟಕದಿಂದ ಇವರು ಆಯ್ಕೆಯಾಗಿರುತ್ತಾರೆ. ಸೆ.06 ರಂದು ಬಂಟ್ವಾಳದ ಬಂಟರ ಭವನದಲ್ಲಿ ನಡೆಯುವ ಅದ್ವಿತೀಯ ವ್ಯವಹಾರ ಸಮ್ಮೇಳನ 2020 ರಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Also Read  ಕೊರೋನ ಹೆಸರಲ್ಲಿ ಪ್ರಚೋದನಕಾರಿ, ಸುಳ್ಳು ಸುದ್ದಿ ಹರಡಿದಲ್ಲಿ ಕಠಿಣ ಕ್ರಮ: ಎಸ್ಪಿ ಎಚ್ಚರಿಕೆ

 

 

error: Content is protected !!
Scroll to Top