ತಡರಾತ್ರಿ ಪಟ್ರೋಲ್ ಬಂಕ್ ನಲ್ಲಿ ಕಳ್ಳರ ಕರಾಮತ್ತು ➤ 70 ಸಾವಿರ ನಗದು ದರೋಡೆ

(ನ್ಯೂಸ್ ಕಡಬ) newskadaba.com ಕಡಬ. ಸೆ.04:  ಬಿ.ಸಿ ರೋಡು ಪುಂಜಾಲಕಟ್ಟೆ ರಸ್ತೆಯ ದೈಕಿನಕಟ್ಟೆಯಲ್ಲಿರುವ ಧರ್ಮಶ್ರೀ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಗುರುವಾರ ರಾತ್ರಿ ನಡೆದಿದೆ.

 

ಬಂಕ್ ನಲ್ಲಿ ಕಳ್ಳರು ಶಟರ್ ನ ಬೀಗ ಮುರಿದು ಗಾಜು ಒಡೆದು ಒಳನುಗ್ಗಿದ್ದು, ಸುಮಾರು 70 ಸಾವಿರ ರೂ. ನಗದು ದೋಚಿದ್ದಾರೆ. ತಡರಾತ್ರಿ ಈ ಘಟನೆ ನಡೆದಿದ್ದು ಇಂದು (ಶುಕ್ರವಾರ) ಬೆಳಗ್ಗೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಸಂದೇಶ್ ಪಿ.ಜಿ ಹಾಗೂ ಪುಂಜಾಲಕಟ್ಟೆ ಪಿಎಸೈ ಸೌಮ್ಯ ಭೇಟಿ ನೀಡಿ ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

Also Read  ಬೆಳೆ ವಿಮೆ ಪ್ರೀಮಿಯಂ ಪಾವತಿಸಿದವರಿಗೆ ಆ. 14 ರವರೆಗೆ ದಾಖಲೆ ಸಲ್ಲಿಕೆಗೆ ಅವಕಾಶ !

 

error: Content is protected !!
Scroll to Top