ರಾಜ್ಯಮಟ್ಟದ ವಿಜ್ಞಾನ ವಿಷಯಾಧಾರಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸಮ್ಯಕ್ತ್.ಹೆಚ್.ಜೈನ್

(ನ್ಯೂಸ್ ಕಡಬ) newskadaba.com ಕಡಬ, ಸೆ. 03: ಕರ್ನಾಟಕ ರಾಜ್ಯ ಸಾಹಿತ್ಯ ಪರಿಷತ್ತು (ರಿ) ಜಿಲ್ಲಾ ಘಟಕ ರಾಯಚೂರು,ಅಂತರ್ಜಾಲದ ಅಂಗಳದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ವಿಷಯದ ಕಾವ್ಯ ರಚನಾ ಸ್ಪರ್ಧೆಯು ಇತ್ತೀಚೆಗೆ ನಡೆಯಿತು.

 

ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸಮ್ಯಕ್ತ್.ಹೆಚ್.ಜೈನ್.‌ ರವರು ತೃತೀಯ ಸ್ಥಾನ ಪಡೆದಿರುವುದರ ಮೂಲಕ ಸಂಸ್ಥೆಯಿಂದ ಕೊಡಲ್ಪಡುವ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ. ಕವಿ, ಲೇಖಕ, ವಿಮರ್ಶೆಗಾರ, ನಾಟಕ ರಚನೆಗಾರರಾಗಿ ಗುರುತಿಸಿಕೊಂಡಿರುವ ಇವರು ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಮತ್ತು ಶ್ರೀಮತಿ ಮಂಜುಳಾ ರವರ ಸುಪುತ್ರ.

 

 

 

error: Content is protected !!

Join the Group

Join WhatsApp Group