ಸುಬ್ರಹ್ಮಣ್ಯ: ಮಠಾಧೀಶ ಶ್ರೀಗಳಿಂದ 24 ನೇ ಚಾತುರ್ಮಾಸ್ಯ ಸಮಾಪನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ. 03: ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ಅವರ 24 ನೇ ಚಾತುರ್ಮಾಸ್ಯ ಕಳೆದ ದಿನ ಸಮಾಪನ ಗೊಂಡಿತು.

 

 

ಈ ಹಿನ್ನಲೆಯಲ್ಲಿ ಕಳೆದ ದಿನ ದರ್ಪಣ ತೀರ್ಥ ನದಿಯಲ್ಲಿ ಮೃತ್ತಿಕಾ ವಿಸರ್ಜನೆ ನಡೆಯಿತು. ಬಳಿಕ ಶ್ರೀಗಳು ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳುವ ಮೂಲಕ ಸೀಮೋಲ್ಲಂಘನೆ ಮಾಡಿದರು. ಈ ಸಂದರ್ಭದಲ್ಲಿ ಭಕ್ತರು ಕುಣಿತ ಭಜನೆ ಮೂಲಕ ಮೆರವಣಿಗೆಯೊಂದಿಗೆ ಸ್ವಾಮೀಜಿಯವರನ್ನು ಸ್ವಾಗತಿಸಿದರು. ವೇಣುಗೋಪಾಲ ಶಾಸ್ತ್ರಿ, ವಾಸ್ತುಶಿಲ್ಪಿ ಪ್ರಸಾದ್‌ ಮುನಿಯಂಗಳ, ಮಾಹಬಲ ಕೃಷ್ಣ ಭಟ್‌, ಗಣಪತಿ ಭಟ್‌, ಸರೋಜಿನಿ ಮತ್ತಿತರರು ಉಪಸ್ಥಿತರಿದ್ದರು.

 

Also Read  ರಾಗಿಣಿ-ಸಂಜನಾಗೆ ಇನ್ನೆರಡು ದಿನ ಜೈಲೇ ಫಿಕ್ಸ್​​

 

 

error: Content is protected !!
Scroll to Top